ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ವಿಧಾನ ಪರಿಷತ್ ಚುನಾವಣೆ ಹೊತ್ತಲ್ಲೇ ರಾಜಕೀಯವಾಗಿ ಕಿತ್ತಾಡಿಕೊಳ್ಳೋ ನಾಯಕರು ಇಂದು ವಿಧಾನಸೌಧದಲ್ಲಿ ಮುಖಾಮುಖಿಯಾದರು.
ಇಂದು ವಿಧಾನಸೌಧದ ಕಾರಿಡಾರ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮುಖಾಮುಖಿಯಾದರು. ಈ ವೇಳೆ ನಾಯಕರು ಪರಸ್ಪರ ನೋಡಿಯೂ ನೋಡದಂತೆ ತೆರಳಿದ್ದಾರೆ.
ವಿಧಾನಪರಿಷತ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ಘಟಾನುಘಟಿ ನಾಯಕರು ಎದುರಾದರೂ ಕೂಡಾ ಪರಸ್ಪರ ಮುಖ ನೋಡದೇ ಹೊರಟುಹೋಗಿದ್ದಾರೆ.
ಸಿಎಂ ಸಿದ್ದರಾಂಯ್ಯರನ್ನು ಕಂಡ ಕುಮಾರಸ್ವಾಮಿ ದೂರದಿಂದಲೇ ನಮಸ್ಕರಿಸಿ ಹೊರಟಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಮುಖವನ್ನೂ ನೋಡದ ಕುಮಾರಸ್ವಾಮಿ ಎತ್ತಲೋ ನೋಡುತ್ತಲೇ ಕಾರಿಡಾರ್ನಿಂದ ಎಕ್ಸಿಟ್ ಆಗಿದ್ದಾರೆ