27,04,166 ರೈತರು ನೋಂದಣೆ ಪೈಕಿ 11,85,642 ರೈತರು 2094 ಕೋಟಿ ರೂಪಾಯಿ ಕ್ಲೇಮ್ ಮಾಡಿದಾರೆ.
2024 25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಶಂಸನ ಪತ್ರವನ್ನು ನೀಡಿದೆ. ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಇಂದು ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಂದು ಕಾರ್ಯದರ್ಶಿಗಳು ಸಹಕಾರ ಸಚಿವಾಲಯ ಭಾರತ ಸರ್ಕಾರ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.
‘ಇಂಡಿಯಾ ಗೇಟ್ ಮುಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು ಬಿಜೆಪಿ ಸರ್ಕಾರ. ಮೊದಲ ಬಾರಿಗೆ, ಕೆಂಪು ಕೋಟೆಯಲ್ಲಿ ಆಜಾದ್ ಹಿಂದ್ ಫೌಜ್ ಕೊಡುಗೆಯನ್ನು ಗೌರವಿಸಲಾಯಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಒಂದು ದ್ವೀಪಕ್ಕೆ ನೇತಾಜಿ ಹೆಸರನ್ನು ಇಡಲಾಯಿತು.
ಬಂಧಿತ ಶಂಕಿತರ ವಿಚಾರಣೆಯಲ್ಲಿ ಭಯೋತ್ಪಾದಕರಾಗಿ ನಾವು ಬದಲಾದ್ವಿ ಎಂದು ಬಹುತೇಕ ಎಲ್ಲರೂ ಒಪ್ಪಿಕೊಂಡಿದ್ದಾರೆ. ಜೊತೆಗೆ ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ್ ದಾರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಎನ್ಐಎ ಅಧಿಕಾರಿಗಳು ಆತನನ್ನೂ ಬಂಧಿಸಿದ್ದಾರೆ. ಯಾಸಿರ್ ಅಹ್ಮದ್ ದಾರ್ನೇ ಆತ್ಮಹತ್ಯಾ ಬಾಂಬರ್ ಎಂದು ಬಿಂಬಿಸುವುದರಲ್ಲಿ ಉಗ್ರರು ಯಶಸ್ವಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಗತ ವೈಭವವನ್ನು ಮರಳಿ ಪಡೆಯಲು ದಳಪತಿಗಳು ಈಗ ಭಾರಿ ರಣತಂತ್ರ ರೂಪಿಸುತ್ತಿದ್ದಾರೆ. ಮೈಸೂರಿನ ಮುಖಂಡರ ಜೊತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನಡೆಸಿದ ಸಭೆಯಲ್ಲಿ ಜಿ.ಟಿ ದೇವೇಗೌಡ್ರ ಸಂಭವನೀಯ ನಿರ್ಗಮನ, ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.
ಸೌಲಭ್ಯದ ದುರುಪಯೋಗ ತಡೆಯಲು ಮತ್ತು ಅರ್ಹರಿಗೆ ತಲುಪಿಸಲು ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಬಡ ಮತ್ತು ಸಾಮಾನ್ಯ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವುದು
ಲಕ್ನೋ: ಟ್ರಕ್ (Truck) ಒಂದು ಟೋಲ್ ಪ್ಲಾಜಾದಲ್ಲಿ (Toll Plaza) ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸಿಬ್ಬಂದಿಯನ್ನು 50 ಮೀ. ಎಳೆದೊಯ್ದ ಶಾಕಿಂಗ್ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ. ಇದರ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಲ್ ಫಲಾಹ್ ವಿಶ್ವವಿದ್ಯಾಲಯವು(Al Falah University) ಭಯೋತ್ಪಾದನಾ ನಂಟಿರುವ ಮೂವರು ವೈದ್ಯರು ಸೇರಿದಂತೆ ಇತರ ಅನೇಕ ವೈದ್ಯರನ್ನು ಪೊಲೀಸರ ಪರಿಶೀಲನೆಯಿಲ್ಲದೆ ನೇಮಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.
ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್(AR Rahman)ಅವರು ಬಾಲಿವುಡ್ನಲ್ಲಿ ತಮ್ಮ ಧರ್ಮದ ಕಾರಣದಿಂದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಎ ಆರ್ ರೆಹಮಾನ್ ಮತ್ತೊಮ್ಮೆ ಪ್ರತಿಕ್ರೀಯೆ ನೀಡಿದ್ದಾರೆ.
ವಂದೇ ಭಾರತ್ ಸ್ಲೀಪರ್( Vande Bharat Sleeper) ರೈಲಿನ ಉದ್ಘಾಟನೆಯಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಲ್ಲು ತೂರಾಟದ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (RPF) ಎಚ್ಚರಿಕೆ ವಹಿಸಿದ್ದಾರೆ.
ರಷ್ಯಾದ( Russian) ಅಲೆಕ್ಸಿ ಲಿಯೊನೊವ್ ಎಂಬಾತ ಗೋವಾದಲ್ಲಿ(Goa) ತನ್ನಿಬ್ಬರು ಗೆಳತಿಯರಾದ ಎಲೆನಾ ಕಸ್ತಾನೋವಾ ಮತ್ತು ಎಲೆನಾ ವಾನೀವ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಗೋವಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಲವಾರು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Suryavanshi) U-19 ವಿಶ್ವಕಪ್ನಲ್ಲಿ (World cup) ಸ್ಫೋಟಕ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆ ಬರೆದಿದ್ದು, ವಿರಾಟ್ ಕೊಹ್ಲಿಯವರ (Virat Kohli) ಹಳೆಯ ದಾಖಲೆ ಪತನಗೊಂಡಿದೆ.
ದೇಶದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮಹಾನಗರ ಪಾಲಿಕೆಯಾದ ನವಿ ಮುಂಬೈನಲ್ಲಿ(Navi Mumbai) ನಗರಪಾಲಿಕೆ ಚುನಾವಣೆಯಲ್ಲಿ(civic poll) ಬಿಜೆಪಿ(BJP) ಜಯಗಳಿಸಿದ ನಂತರ ಬಿಜೆಪಿ ಕಾರ್ಯಕರ್ತರು ಶಿವಸೇನೆ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಮುಂಬೈ: 2002 ರ ನಾಗರಿಕ ಚುನಾವಣೆಯ ನಂತರ ಯಾವುದೇ ಪಕ್ಷ ಸ್ವಂತವಾಗಿ ಗಳಿಸಿದ ಅತ್ಯಧಿಕ ಸ್ಥಾನವಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC Election) ನಲ್ಲಿ ದಾಖಲೆಯ 89 ಸ್ಥಾನಗಳನ್ನು ಗೆದ್ದಿದ್ದರೂ ಕೂಡಾ ಭಾರತೀಯ ಜನತಾ ಪಕ್ಷ (BJP) ಫಲಿತಾಂಶದಿಂದ (Election Result) ಅತೃಪ್ತವಾಗಿದೆ ಎಂದು ವರದಿಯಾಗಿದೆ. ಪಕ್ಷ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿದೆ ಎಂದು ಹೇಳಿದೆ.
ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ವಿರುದ್ಧ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಗಳು (DGCA) ಗಂಭೀರ ಕ್ರಮ ಕೈಗೊಂಡಿದ್ದು, ವಿಮಾನ ಹಾರಾಟದಲ್ಲಿ ಉಂಟಾದ ನಿರಂತರ ವ್ಯತ್ಯಯಗಳ ಹಿನ್ನೆಲೆಯಲ್ಲಿ ಸಂಸ್ಥೆಗೆ ಬರೋಬ್ಬರಿ 22 ಕೋಟಿ ರೂ. ದಂಡ ವಿಧಿಸಲಾಗಿದೆ.
ಅಸ್ಸಾಂ(Assam) ಪ್ರವಾಸದಲ್ಲರುವ ಪ್ರಧಾನಿ ನರೇಂದ್ರ ಮೋದಿ(PM Modi) ಮೊದಲ ದಿನದಂದು ಅಸ್ಸಾಂನ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯಗಳನ್ನು ಮೋದಿ ವೀಕ್ಷಿಸಿದರು. ಅಸ್ಸಾಂನ ಗುವಾಹಟಿಯಲ್ಲಿ(Guwahati) ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸಂಜೆ ಸಾಂಸ್ಕೃತಿಕ ನೃತ್ಯಗಳನ್ನು ನೋಡಿದರು.
ಭಾರತದ ಗಡಿ ರಾಜ್ಯಗಳಾದ ಅಸ್ಸಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳಗಳು(Assam, Tripura, West Bengal) ಅಕ್ರಮ ಒಳನುಸುಳುಕಾರರಿಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಬಾಂಗ್ಲಾದೇಶ(Bangladesh) ಮತ್ತು ಮ್ಯಾನ್ಮಾರ್ನ(Myanmar) ಮುಸ್ಲಿಮರಿಗೆ ಗಮನಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ.
ಮುಂಬೈನಲ್ಲಿರುವ(Mumbai) ಅಕ್ರಮ ವಲಸಿಗರ ಒಟ್ಟು ಜನಸಂಖ್ಯೆಯ ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೂ, ಸಂಶೋಧಕರು ಮುಂಬೈ ನಗರದಾದ್ಯಂತ 61 ಪ್ರದೇಶಗಳನ್ನು ನಕ್ಷೆ ಮಾಡಿ 3,014 ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್ ಮುಸ್ಲಿಮರನ್ನು ಕಂಡುಹಿಡಿದ್ದಿದ್ದಾರೆ.
ಮಹಿಳೆಯರ ಪ್ರೀಮಿಯರ್ ಲೀಗ್ (WPL) ಸೀಸನ್ 4 ರಲ್ಲಿ ಆರ್ ಸಿಬಿ (RCB) ತಂಡವು ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಗೆಲುವಿನ ಓಟ ಮುಂದುವರೆದಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಎಂಟು ತಿಂಗಳ ಹಿಂದೆ ನಡೆಸಿದ ಆಪರೇಷನ್ ಸಿಂಧೂರದಿಂದ ಬಲವಾದ ಪೆಟ್ಟು ತಿಂದರೂ, ಕದನ ವಿರಾಮ ಉಲ್ಲಂಘಿಸುವ ತನ್ನ ಚಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ.
ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರ ಬ್ಲಾಕ್ನ ಕೈತ್ವಾಲಿಯಾದಲ್ಲಿರುವ ಜಾನಕಿ ನಗರದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ (Viraat Ramayan Mandir) ಇಂದು (ಜ.17) ವಿಶ್ವದ ಅತಿದೊಡ್ಡ ಅಖಂಡ ಶಿವಲಿಂಗ (Shivalinga) 'ಸಹಸ್ರಲಿಂಗಂ' ಅನ್ನು ಪ್ರತಿಷ್ಠಾಪಿಸಲಾಯಿತು.
ಇದರೊಂದಿಗೆ ಅವರು, ಆದಷ್ಟು ಬೇಗ ದಯವಿಟ್ಟು ನಿಮ್ಮ ಕಲಿತ ವಕೀಲರನ್ನು ಸಂಪರ್ಕಿಸಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂ.ಗಳನ್ನು ಪರಿಹಾರವಾಗಿ ಪಾವತಿಸಬೇಕಾಗುತ್ತದೆ. ಅದನ್ನು ನಾನು ದತ್ತಿ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಮಾಲ್ಡಾ ಮತ್ತು ಹೌರಾ-ಗುವಾಹಟಿ (ಕಾಮಾಖ್ಯ) ನಡುವೆ ಚಲಿಸುವ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಿದರು.
ನವದೆಹಲಿ: ಸರ್ವಾಧಿಕಾರಿ ಖಮೇನಿ ಆಡಳಿತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ, ಇರಾನ್ನಿಂದ (Iran) ಭಾರತೀಯರನ್ನು (Indians) ಕರೆದೊಯ್ಯುವ ಮೊದಲ ಎರಡು ವಾಣಿಜ್ಯ ವಿಮಾನಗಳು (Flight) ನಿನ್ನೆ ತಡರಾತ್ರಿ ದೆಹಲಿಗೆ ಬಂದಿಳಿದಿವೆ.
ಮುಂಬೈ: 2026 ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ (BMC Election) ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದೆ. ಇದೇ ಸಂದರ್ಭ ನಟಿ, ರಾಜಕಾರಣಿ ಕಂಗನಾ ರನೌತ್ (Kangana Ranaut) ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ.
ಹರಿದ್ವಾರದ(Haridwar) ಕುಂಭ ಪ್ರದೇಶದ ವ್ಯಾಪ್ತಿಯ ಎಲ್ಲ ಗಂಗಾ ಘಾಟ್ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕೆಂಬ ಬೇಡಿಕೆಗಳ ನಡುವೆ ಶುಕ್ರವಾರ ಹರ್ ಕಿ ಪೌರಿಯಲ್ಲಿ(Har Ki Paur) 'ಹಿಂದೂಯೇತರ ನಿಷೇಧಿತ ಪ್ರದೇಶ' ('Non-Hindu Prohibited Area) ಎಂದು ಬರೆದಿರುವ ಫಲಕಗಳು ಕಂಡುಬಂದಿದೆ.
ನವದೆಹಲಿ: ಬೆಳ್ಳಿ ಬೆಲೆಯು (Silver Rate) ಶುಕ್ರವಾರ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿಗೆ 3,600 ರೂ. ಏರಿಕೆಯಾಗಿ 2,92,600 ರೂ.ಗೆ ತಲುಪಿದ್ದು, ದಾಖಲೆಯ ಗರಿಷ್ಠ ಬೆಲೆಗೆ ಕಂಡಿದೆ. ಆದರೆ ಶೇ. 99.9 ರಷ್ಟು ಶುದ್ಧತೆಯ ಚಿನ್ನದ ಬೆಲೆ (Gold Rate) ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಹಿಂದೆ ಸರಿದು 10 ಗ್ರಾಂಗೆ 1,100 ರೂ.ಗಳಷ್ಟು ಇಳಿಕೆಯಾಗಿ 1,46,200 ರೂ.ಗಳಿಗೆ ತಲುಪಿದೆ.
ಇರಾನ್ನಲ್ಲಿ(Iran) ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ ಸಾವಿರಾರು ಮಂದಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಇರಾನ್ನಲ್ಲಿ ಆಡಳಿತ ಬದಲಾವಣೆಯಾದರೆ ಭಾರತದ(India) ಮೇಲೆ ದೊಡ್ಡ ಹೊಡೆತ ಬೀಳಲಿದೆ.
ಅಫ್ಘಾನಿಸ್ತಾನದಲ್ಲಿ(Afghanistan) ಭಾರತದ(India) ಮಾತ್ರೆಗಳು ಅಗ್ಗವಾಗಿ ಸಿಗುತ್ತದೆ ಎಂದು ಅದು ಪಾಕಿಸ್ತಾನದ ಮಾತ್ರೆಗಳಿಗಿಂತ ಉತ್ತಮ ರಿಸಲ್ಟ್ ನೀಡುತ್ತದೆ ಎಂದು ಅಫ್ಘಾನ್ ಬ್ಲಾಗರ್ ಫಜಲ್ ಅಫ್ಘಾನ್ ಎಂಬಾತ ಎಕ್ಸ್ ನಲ್ಲಿ ಮಾಹಿತಿ ಶೇರ್ ಮಾಡಿದ್ದಾನೆ.
ಬೆಂಗಳೂರು: ಈ ವರ್ಷ ದೆಹಲಿಯಲ್ಲಿ (Delhi) ನಡೆಯುವ ಗಣರಾಜ್ಯೋತ್ಸವ (Republic Day) ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ (Tableau) ಅವಕಾಶ ನೀಡಿಲ್ಲ. ಹೀಗಾಗಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕದ ಟ್ಯಾಬ್ಲೋ ಭಾಗವಹಿಸುವುದಿಲ್ಲ ಎನ್ನಲಾಗಿದೆ.
ಭಾರತೀಯ ಜಲಪ್ರದೇಶವನ್ನು (Indian Water Territory) ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಕರಾವಳಿ ಕಾವಲು ಪಡೆ (Coast Guards) 9 ಸಿಬ್ಬಂದಿಯೊಂದಿಗೆ ಪಾಕಿಸ್ತಾನಿ (Pakistan) ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ (Karnataka Politics) ವಿಚಾರ ತಾರಕಕ್ಕೇರಿದೆ. ರಾಹುಲ್ ಗಾಂಧಿ (Rahul Gandhi) ಜೊತೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ (Indian Railway) ಹಲವು ದಶಕ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ ರೈಲ್ವೆ ಇಲಾಖೆಯು ವಿದಾಯದ ವೇಳೆ ಚಿನ್ನಲೇಪಿತ ಬೆಳ್ಳಿಯ ಪದಕವೆಂದು ಹೇಳಿ ಕೊಟ್ಟಿತ್ತು. ಆದರೆ, ಅದು ಸಂಪೂರ್ಣ ಬೆಳ್ಳಿಯದ್ದಲ್ಲ, ತಾಮ್ರದ ಮೇಲೆ ಬೆಳ್ಳಿ ಲೇಪನ ಮಾಡಿದ ಪದಕ ಎಂಬುದು ಬೆಳಕಿಗೆ (Fraud) ಬಂದಿದೆ.
ಮುಂಬರುವ ಫೆ.1 ರಂದು ಭಾನುವಾರವಾಗಿದ್ದರೂ (Sunday) ಭಾರತೀಯ ಷೇರು ಮಾರುಕಟ್ಟೆಗಳು (Stock Market) ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ (BSE) ಮತ್ತು ಎನ್ಎಸ್ಇ (NSE) ಅಧಿಕೃತವಾಗಿ ಪ್ರಕಟಿಸಿವೆ.
ಯಶಸ್ವೀ ಸಂಗೀತಗಳನ್ನು ನೀಡಿದರೂ ಕೂಡ ಬಾಲಿವುಡ್ನಲ್ಲಿ ಹೊರಗಿನವನು ಎಂಬ ಭಾವನೆ ಹೋಗಿಲ್ಲ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ (AR Rahman) ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳ (BMC Election) ಫಲಿತಾಂಶ ಹೊರಬಿದ್ದಿದೆ. ಮುಂಬೈನಲ್ಲಿ ಕೇಸರಿ ಸೇನೆ ಅಕ್ಷರಶಃ ಆರ್ಭಟಿಸಿದೆ. ಠಾಕ್ರೆಗಳ ಕೋಟೆಯನ್ನು ಬಿಜೆಪಿ (BJP), ಶಿವಸೇನೆ (Shivasene) ಸೇರಿ ಛಿದ್ರ ಛಿದ್ರ ಮಾಡಿವೆ.