Sunday, July 7, 2024
Homeಕ್ರೈಂRenukswamy Murder: ನನ್ನ ಮಗ ತಪ್ಪು ಮಾಡಿದ್ದರೂ ದರ್ಶನ್‌ ಹೀಗೆ ಶಿಕ್ಷಿಸಬಹುದೇ? - ರೇಣುಕಾಸ್ವಾಮಿ...

Renukswamy Murder: ನನ್ನ ಮಗ ತಪ್ಪು ಮಾಡಿದ್ದರೂ ದರ್ಶನ್‌ ಹೀಗೆ ಶಿಕ್ಷಿಸಬಹುದೇ? – ರೇಣುಕಾಸ್ವಾಮಿ ತಂದೆ ಪ್ರಶ್ನೆ

ಚಿತ್ರದುರ್ಗ: ನಮ್ಮ ಮಗ ತಪ್ಪು ಮಾಡಿರಬಹುದು.  ಹಾಗಂತ ನಾನು ಟಿವಿಗಳಲ್ಲಿ ನೋಡಿದ್ದೇನೆ. ಆದರೆ ಅದಕ್ಕೆ ಇಂಥ ಶಿಕ್ಷೆ ನೀಡಬೇಕಿತ್ತಾ…? ಇದು ಚಿತ್ರದುರ್ಗದ ಮೃತ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ ಶಿವನಗೌಡರ್ ಪ್ರಶ್ನೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ನಮ್ಮ ಕುಟುಂಬ ಈಗ ಬೀದಿಗೆ ಬಂದಿದೆ. ಈಗ ಹಲವು ನಟಿಯರು ನನಗೂ ಮೆಸೇಜ್‌ ಮಾಡಿದ್ದ ಎಂದು ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ.  ಒಂದು ವೇಳೆ ನನ್ನ ಮಗ ತಪ್ಪು ಮಾಡಿದ್ದರೆ ಕಂಪ್ಲೆಂಟ್ ಕೊಡಬೇಕಿತ್ತು. ಇಷ್ಟು ದಿನ ಏಕೆ ಸುಮ್ಮನಿದ್ದಿರಿ? ಆಗಲೇ ಪೊಲೀಸ್ ಅವರಿಗೆ ದೂರು ಕೊಡಬೇಕಿತ್ತು ಅಲ್ಲವೇ? ಎಂದಿದ್ದಾರೆ.

ಕಾನೂನು ಕ್ರಮ ಕೈಗೊಳ್ಳಲು ಬೇರೆ ಬೇಕಾದಷ್ಟು ಸಾಧನಗಳಿದ್ದವು. ಬೇರೆ ದಾರಿಗಳು ಇದ್ದವು. ಏನೇ ಆಗಿದ್ದರೂ ಈ ರೀತಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡುವುದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೇ ಎಂಬುದು ನನ್ನ ಪ್ರಶ್ನೆ ಎಂದಿದ್ದಾರೆ.

ಅವನು ಮೆಸೇಜ್ ಮಾಡಿದ್ದ ಎನ್ನುವವರಿಗೆ ನನ್ನ ಪ್ರಶ್ನೆ, ನೀವೂ ಈ ರೀತಿ ಮಾಡಿದ್ದು ಸರೀನಾ. ನೀವು ಪೊಲೀಸ್‌ ಕಂಪ್ಲೆಂಟ್ ಕೊಡಬಹುದಿತ್ತು. ಬೇರೆ ದಾರಿಗಳಿದ್ದವು ಅಲ್ಲವೇ? ಈಗ ಒಬ್ಬೊಬ್ಬರು ಏನೋ ಹೇಳ್ತಾ ಇದ್ದಾರೆ. ಅವನು ಮೆಸೇಜ್ ಹಾಕಿದ್ದಾನೊ ಇಲ್ಲವೋ ನಮಗೆ ಗೊತ್ತಿಲ್ಲ. ಆ ಸಮಯದಲ್ಲೇ ನೀವು ಕಂಪ್ಲೆಟ್ ಕೊಡಬಹುದಿತ್ತು ಎಂದು ಮಗನ ಸಾವಿಗೆ ಕಣ್ಣೀರಾಗಿದ್ದಾರೆ.

ಹೆಚ್ಚಿನ ಸುದ್ದಿ