Sunday, July 7, 2024
Homeಟಾಪ್ ನ್ಯೂಸ್Rahul Gandhi: ಜನಸಾಮಾನ್ಯರಿಗೆ ದನಿಯಾಗಲಿದೆ ವಿರೋಧ ಪಕ್ಷ - ಲೋಕಸಭೆಯಲ್ಲಿ ರಾಹುಲ್‌ ರಣಕಹಳೆ! VIDEO

Rahul Gandhi: ಜನಸಾಮಾನ್ಯರಿಗೆ ದನಿಯಾಗಲಿದೆ ವಿರೋಧ ಪಕ್ಷ – ಲೋಕಸಭೆಯಲ್ಲಿ ರಾಹುಲ್‌ ರಣಕಹಳೆ! VIDEO

ನವ ದೆಹಲಿ: 18ನೇ ಲೋಕಸಭೆಗೆ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಪ್ರಕಾಶ್‌ ಬಿರ್ಲಾ ಅವರಿಗೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅಭಿನಂದನೆ ಸಲ್ಲಿಸಿದರು.

ನಿಮ್ಮ ಆಯ್ಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎರಡ ನೇ ಬಾರಿಗೆ ಸ್ಪೀಕರ್‌ ಆಗಿ ಆಯ್ಕೆಯಾದ ನಿಮ್ಮನ್ನು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.

ಸ್ಪೀಕರ್ ಸರ್ ಲೋಕಸಭೆಯು ಇಡೀ ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತದೆ. ಅವರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಅಧಿಕಾರವಿದೆ. ಆದರೆ ವಿರೋಧ ಪಕ್ಷ ಕೂಡ ಭಾರತದ ಶ್ರೀಸಾಮಾನ್ಯನ ಧ್ವನಿಯಾಗಿದೆ. ಆ ಭಾರಿಯಂತೂ ಈ ಧ್ವನಿ ಇನ್ನು ಹೆಚ್ಚು ಸದ್ದು ಮಾಡಲಿದೆ ಎಂದು ಸದನಕ್ಕೆ ತಿಳಿಸಿದರು.

ಸ್ಪೀಕರ್‌ ಆಗಿ ನಿಮ್ಮ ಕಾರ್ಯ ನಿರ್ವಹಣೆಗೆ ವಿರೋಧ ಪಕ್ಷ ಸಹಕಾರ ನೀಡುತ್ತದೆ. ಸದನವು ಜನಹಿತದಲ್ಲಿ ನಡೆಯಬೇಕು. ಇದು ಪ್ರಜೆಗಳಿಗೆ ಉಪಯೋಗವಾಗುವಂತಾಗಬೇಕು. ಇಲ್ಲಿ ಭರವಸೆಯ ಧ್ವನಿ ಕೇಳುವಂತಾಗಬೇಕು. ಆ ಧ್ವನಿಗೆ ಇಲ್ಲಿ ಕೇಳುವಂತಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಹೆಚ್ಚಿನ ಸುದ್ದಿ