Sunday, July 7, 2024
Homeಟಾಪ್ ನ್ಯೂಸ್Chardham Yatra: ಯಮುನೋತ್ರಿ ದಾರಿಯಲ್ಲಿ ಭೂಕುಸಿತ - ಚಾರ್‌ಧಾಮ್ ಯಾತ್ರೆಗೆ ತಡೆ!

Chardham Yatra: ಯಮುನೋತ್ರಿ ದಾರಿಯಲ್ಲಿ ಭೂಕುಸಿತ – ಚಾರ್‌ಧಾಮ್ ಯಾತ್ರೆಗೆ ತಡೆ!

ಉತ್ತರಖಂಡ:  ದಾಬರ್ ಕೋಟ್ ಎಂಬಲ್ಲಿ ಭೂ ಕುಸಿತ ಉಂಟಾಗಿದ್ದು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಭೂಕುಸಿತದಿಂದಾಗಿ ಚಾರ್‌ ಧಾಮ್‌ ಯಾತ್ರಿಕರ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ರಸ್ತೆ ಮೇಲೆ ಬಿದ್ದು ಕಲ್ಲು ಮತ್ತು ಮಣ್ಣಿನ ರಾಶಿಯ ತೆರವು ಕೆಲಸ ಆರಂಭವಾಗಿದ್ದು, ಸ್ವಲ್ಪ ಸಮಯ ತೆಗೆದುಕೊಳ್ಳಲಾಗಿದೆ ಎಂದು ಉತ್ತರಖಂಡ ಪೊಲೀಸರು ಮಾಹಿತಿ ನೀಡಿದ್ದಾರೆ. ಚಾರ್‌ಧಾಮ್‌ ಯಾತ್ರೆಗಳಲ್ಲಿ ಒಂದಾದ ಬದ್ರಿನಾಥ್ ದರ್ಶನಕ್ಕೆ ಹೋಗಲು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಪ್ರಮುಖ ರಸ್ತೆಯಾಗಿದೆ.

ಈಗ ಚಾರ್‌ಧಾಮ್‌ ಯಾತ್ರೆ ಆರಂಭವಾಗಿದ್ದು ಈ ಹೆದ್ದಾರಿಯಲ್ಲಿ ಸಂಚಾರ ಹೆಚ್ಚಾಗಿದೆ. ಆದರೆ ಈಗ ಭೂಕುಸಿತ ಆಗಿದ್ದರಿಂದ ಯಾತ್ರಾರ್ಥಿಗಳಿಗೆ ತೊಂದರೆಯಾಗಿದೆ. ತೆರವು ಕಾರ್ಯಾಚರಣೆ ಆರಂಭವಾಗಿದ್ದರೂ ಭೂಕುಸಿತ ಮುಂದುವರಿದಿದ್ದು ಕೆಲಸಕ್ಕೆ ಅಡಚಣೆಯಾಗಿದೆ. ಹಾಗಾಗಿ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ. ಇದರಿಂದ ಭಕ್ತರು ಕೆಲವು ದಿನಗಳ ಮಟ್ಟಿಗೆ ಕಾಯುವುದು ಅನಿವಾರ್ಯವಾಗಿದೆ.

ಹೆಚ್ಚಿನ ಸುದ್ದಿ