ನವ ದೆಹಲಿ: ರಾಜ್ಯಸಭಾದಲ್ಲಿ ರಾಷ್ಟ್ರಪತಿ ವಂದನಾ ಭಾಷಣದ ಮೇಲೆ ಮೋದಿ ಉತ್ತರ ನೀಡಲು ಮುಂದಾಗುತ್ತಿದ್ದಂತೆ ವಿಪಕ್ಷಗಳು ಸಭಾತ್ಯಾಗ ಮಾಡಿದವು.
ಈ ಬಾರಿ ಸಂವಿಧಾನ ರಕ್ಷಿಸಿ ಎಂಬ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಿದ್ದು ವಿಚಿತ್ರವಾಗಿತ್ತು ಎಂದ ಮೋದಿ, ಕಾಂಗ್ರೆಸ್ ಕಾಲದಲ್ಲಿ ಸಂವಿಧಾನವನ್ನು ಎಷ್ಟರ ಮಟ್ಟಿಗೆ ಗೌರವಿಸಲಾಯ್ತು ಎಂಬುದು ದೇಶಕ್ಕೇ ಗೊತ್ತಿದೆ ಎಂದು ಮಾತನ್ನಾರಂಭಿಸಿದರು
ಈ ವೇಳೆ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸದರು. ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ವಿರೋಧ ಪಕ್ಷದವರಿಗೆ ಸತ್ಯ ಅರಿಯುವ ತಾಳ್ಮೆ ಇಲ್ಲ ಎಂದರು. ಅಷ್ಟರಲ್ಲಾಗಲೇ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಈ ವೇಳೆ ಮಾತನಾಡಿದ ಮೋದಿ ವಿಪಕ್ಷ ನಾಯಕರಿಗೆ ಸತ್ಯ ಕೇಳುವ ತಾಳ್ಮೆ ಇಲ್ಲ ಎಂದರು
#WATCH | After Opposition MPs walk out of the Rajya Sabha while PM speaks on Motion of Thanks to President's Address, Rajya Sabha Chairman and Vice President Jagdeep Dhankhar says, "…I urged them the LoP was given adequate time to speak without any interruptions. Today, they… pic.twitter.com/Am2HflpoVc
— ANI (@ANI) July 3, 2024
ಸಭಾತ್ಯಾಗ ಮಾಡಿದ ನಾಯಕರು ಮೋದಿ ಸದನಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ರು. ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಮೋದಿಯವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ರವರನ್ನು ಅವಮಾನಿಸಿತ್ತು ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಎಂದೆಂದಿಗೂ ಸಂವಿಧಾನ ವಿರೋಧಿಯೇ ಹೊರತು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಲು ಸಾಧ್ಯವಿಲ್ಲ ಎಂದ್ರು.
#WATCH | On the Opposition's walkout from Rajya Sabha, Congress leader and LoP in Rajya Sabha Mallikarjun Kharge says, "We walked out because the PM was addressing the House on the President's address and told some wrong things to the House. It's his habit to lie and say things… pic.twitter.com/K3ckOaWnbL
— ANI (@ANI) July 3, 2024