ಚಿಕ್ಕಬಳ್ಳಾಪುರ: ಕುಮಾರಣ್ಣನ ಆಸೆಯಂತೆ ನಾನು ನಿಮ್ಮನ್ನ ರಕ್ಷಣೆ ಮಾಡ್ತೇನೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ (K Sudhakar) ಹೇಳಿದರು.
ಜೆಡಿಎಸ್, ಬಿಜೆಪಿ ಮಹಾಮೈತ್ರಿ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಿಗೆ ಕ್ಷಮೆಯಾಚಿಸಿದ ಬಳಿಕ ಮಾತನಾಡಿ, ನನ್ನ ಆಡಳಿತದ ಅವಧಿಯಲ್ಲಿ ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಜನತಾದಳದ ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕಾಗಿ ತೊಂದರೆ ಕೊಟ್ಟಿಲ್ಲ. ಕುಮಾರಣ್ಣನ ಆಸೆಯಂತೆ ನಾನು ನಿಮ್ಮನ್ನ ರಕ್ಷಣೆ ಮಾಡ್ತೇನೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ದೀರ್ಘ ಕಾಲದ ಮೈತ್ರಿಯಾಗಿದೆ. ಕಷ್ಟ ಕಾಲದಲ್ಲಿ ಯಾರು ಕೈ ಹಿಡಿಯುತ್ತಾರೆ ಅವರನ್ನು ನಾನು ಸಾಯೋವರೆಗೂ ಮರೆಯಲ್ಲ ಎಂದು ತಿಳಿಸಿದರು.