Sunday, July 7, 2024
Homeಚುನಾವಣೆ 2023KTR TWEET : ಈ ಸೋಲು ನಿರೀಕ್ಷಿಸಿರಲಿಲ್ಲ ಮತ್ತೆ ಅಧಿಕಾರಕ್ಕೆ ಬರ್ತೇವೆ - ಕೆಟಿಆರ್‌ ಟ್ವೀಟ್‌

KTR TWEET : ಈ ಸೋಲು ನಿರೀಕ್ಷಿಸಿರಲಿಲ್ಲ ಮತ್ತೆ ಅಧಿಕಾರಕ್ಕೆ ಬರ್ತೇವೆ – ಕೆಟಿಆರ್‌ ಟ್ವೀಟ್‌

ತೆಲಂಗಾಣ : ಕಾಂಗ್ರೆಸ್‌(Congress) ಅಬ್ಬರದ ಓಟದಲ್ಲಿ ಬಿಆರ್‌ಎಸ್‌(BRS) ಮಂಕಾಗಿದ್ದು, 2 ಬಾರಿ ಸತತ ಗೆಲುವು ಸಾಧಿಸಿದ್ದ ಬಿಆರ್‌ಎಸ್‌ ಪಕ್ಷ ಈ ಬಾರಿ ಭಾರಿ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ ಗ್ಯಾರೆಂಟಿಗಳ ಕಮಾಲ್‌ನಲ್ಲಿ ಜನರ ವಿಶ್ವಾಸಗಳಿಸುವಲ್ಲಿ ಬಿಆರ್‌ಎಸ್‌ ಸ್ಪಷ್ಟವಾಗಿ ಸೋತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಕೆ ಸಿ ಆರ್‌ ಪುತ್ರ ಕೆ ಟಿ ರಾಮ್‌ ರಾವ್‌ ಎರಡು ಬಾರಿ ಅಧಿಖಾರ ನೀಡಿದ್ದಕ್ಕೆ ತೆಲಂಗಾಣ ಜನತೆಗೆ ಧನ್ಯವಾದ ಅರ್ಫಿಸಿದ್ದಾರೆ. ಈ ಸೋಲಿನಿಂದ ಬೇಸರವಾಗಿಲ್ಲ ಆದರೆ ಅಸಮಾಧಾನವಾಗಿದೆ, ಇದನ್ನು ಸವಾಲಾಗಿ ತೆಗೆದುಕೊಂಡು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅಭಿನಂದನೆ ಕೂಡ ವ್ಯಕ್ತಪಡಿಸಿದ್ದಾರೆ.

 

ಹೆಚ್ಚಿನ ಸುದ್ದಿ