ಪುತ್ತೂರು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪುತ್ತೂರು ಮತ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧಿಸಿರುವ ಹಿಂದುತ್ವವಾದಿ ನಾಯಕ ಅರುಣ್ ಪುತ್ತಿಲ ವಿರುದ್ಧ ಹಿರಿಯ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದಾರೆ.
ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಪ್ರಶ್ನಿಸಿದ್ದಾರೆ.
ಅರುಣ್ ಕುಮಾರ್ ದೇವಸ್ಥಾನದ ದುಡ್ಡು ಹೊಡೆದಿದ್ದಾನೆ. ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ್ದ. ಗೋ ಸಾಗಾಟ ತಡೆದಾಗ ಇದ್ದ ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಅರುಣ್ ಕುಮಾರ್ ಕೂಡಾ ಒಬ್ಬ ಅಷ್ಟೇ ಎಂದು ಕಲ್ಲಡ್ಕ ಭಟ್ ಆಕ್ರೋಶ ಹೊರ ಹಾಕಿದ್ದಾರೆ.
ಅದನ್ನು ಬಿಟ್ಟರೆ ಬೇರೆ ಯಾವ ಹಿಂದುತ್ವದ ಕಾರ್ಯವೂ ಅವನಿಂದ ನಡೆದಿಲ್ಲ, ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗಲೂ ಧಿಕ್ಕರಿಸಿದ ವ್ಯಕ್ತಿ ಆತ. ಈ ವಿಚಾರವೆಲ್ಲಾ ಗೊತ್ತಿಲ್ಲದೆ ಕೆಲವು ಕಾರ್ಯಕರ್ತರು ಅವನ ಹಿಂದೆ ಓಡಾಡ್ತಿದ್ದಾರೆ, ಎಲ್ರಿಗೂ ಶೀಘ್ರದಲ್ಲೇ ಆತನ ಬಂಡವಾಳ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.