ಹುಬ್ಬಳ್ಳಿ: ಲೋಕಸಭಾ ಚುನಾವಣೆ (lokasabha election) ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (jagadish shetter) ಹುಬ್ಬಳ್ಳಿಯ (hubballi) ಕುಂದಗೋಳ (kundagola) ತಾಲೂಕಿಗೆ ಭೇಟಿ ನೀಡಿದರು.
ತಾಲೂಕಿನ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಅವರು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಬಿಜೆಪಿಗೆ (bjp) ಮರು ಸೇರ್ಪಡೆಯಾಗಿ ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಪಕ್ಷ ಸಂಘಟನೆಗಾಗಿ ಗ್ರಾಮದತ್ತ ತೆರಳಿರುವ ಜಗದೀಶ ಶೆಟ್ಟರ್ ನಡೆಗೆ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದರು.
ಕುಂದಗೋಳ ತಾಲೂಕಿನ ಯುವ ನೇತಾರ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅವರ ನಿವಾಸಕ್ಕೆ ತೆರಳಿದ ಜಗದೀಶ್ ಶೆಟ್ಟರ್ ಅವರನ್ನು ನೋಡಲು ನೂರಾರು ಸೇರಿ ಬಿಜೆಪಿ ಗೆಲುವಿಗಾಗಿ ಹಗಲಿರುಳು ದುಡಿಯುವುದಾಗಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮತ್ತಿಗಟ್ಟಿ ಗ್ರಾಮದ ಶಿವಾನಂದ ಮಠದ ಶ್ರೀ ಶಿವಬಸವ ಸ್ವಾಮೀಜಿ, ಡಾ.ಕ್ರಾಂತಿಕಿರಣ, ಮಲ್ಲಿಕಾರ್ಜುನ ಸಾವುಕಾರ ಮತ್ತಿರರರು ಉಪಸ್ಥಿತರಿದ್ದರು.