ಹತ್ರಾಸ್: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾಲ್ತುಳಿತದಲ್ಲಿ 116 ಮಂದಿ ಮೃತಪಟ್ಟಿದ್ದರು. ರಾಶಿ ರಾಶಿ ಹೆಣಗಳು, ಸಾವಿರ ಸಾವಿರ ಮಂದಿ ಗಾಯಾಳುಗಳನ್ನು ನೋಡುವುದು ನರಕ ದೃಶ್ಯವೇ ಸರಿ. ಆ ಗೋಳು ಕರುಳು ಕಿತ್ತು ಬರುವಂತಹ ದೃಶ್ಯಗಳೇ ಅಲ್ಲಿದ್ದವು.
ಈ ನರಕ ಸದೃಶ್ಯವನ್ನು ನೋಡಿದ ಪೊಲೀಸ್ ಕಾನ್ಸ್ ಟೆಬಲ್ ಒಬ್ಬರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ರಜನೀಶ್ ಎಂಬ ಪೊಲೀಸ್ ಕಾನ್ಸ್ ಟೆಬಲ್ ಹೃದಯಾಘಾತಕ್ಕೆ ಬಲಿಯಾದವರು. ಕಾಲ್ತುಳಿತದಲ್ಲಿ ಮೃತಪಟ್ಟ ಹೆಣಗಳ ರಾಶಿ ಕಂಡೊಡನೆ ರಜನೀಶ್ ಗೆ ಹೃದಯಾಘಾತವಾಗಿದ್ದು ತಕ್ಷಣ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿಲು ಪೊಲೀಸ್ ಹಾಗೂ ಗಾಯಾಳುಗಳ ರವಾನಿಸಲು ಆರೋಗ್ಯ ಸಿಬ್ಬಂದಿಯ ನಿಯೋಜನೆ ಮಾಡಲಾಗಿತ್ತು. ರಜನೀಶ್ ಅವರು ಅವಘರ್ ಎಂಬಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ ಭಾಗವಾಗಿದ್ದರು. ಅವಘಡ ನಡೆದ ಸಂದರ್ಭದಲ್ಲಿ ರಜನೀಶ್ ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆ.