Sunday, July 7, 2024
Homeಕ್ರೈಂCrime : ತಂದೆ – ಮಗನ ಪ್ರಾಣ ತೆಗೆದ ಸಾಕು ನಾಯಿ

Crime : ತಂದೆ – ಮಗನ ಪ್ರಾಣ ತೆಗೆದ ಸಾಕು ನಾಯಿ

ಆಂಧ್ರ ಪ್ರದೇಶ : ತಮ್ಮ ಮನೆಯ ಸಾಕು ನಾಯಿ ಕಚ್ಚಿದ್ದರಿಂದ ವಿಶಾಖಪಟ್ಟಣದ ಭೀಮಿಲಿ ಪ್ರದೇಶದಲ್ಲಿ ಆರ್‌ಟಿಸಿ ನಿವೃತ್ತ ಉದ್ಯೋಗಿ ಮತ್ತು ಅವರ ಮಗ ಸಾವನ್ನಪ್ಪಿದ್ದಾರೆ.

ಮೃತರನ್ನು ಅಲ್ಲಿಪಿಲ್ಲಿ ನರಸಿಂಗ ರಾವ್ (59) ಮತ್ತು ಅವರ 28 ವರ್ಷದ ಮಗ ಅನಂತ್ ಗುರು ಭಾರ್ಗವ್ ಎಂದು ಗುರುತಿಸಲಾಗಿದೆ. ಅನಂತ್‌ ಗುರು ರೈಲ್ವೆಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದು ನಾಲ್ಕು ದಿನಗಳ ಅವಧಿಯಲ್ಲಿ ತಂದೆ-ಮಗ ಇಬ್ಬರೂ ಸಾವು ಕಂಡಿದ್ದಾರೆ. ನರಸಿಂಗ ಕಳೆದ ಒಂಬತ್ತು ತಿಂಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮನೆಯ ಸಾಕು ನಾಯಿಯೇ ಕುಟುಂಬ ಸದಸ್ಯರ ಮೇಲೆ ಏಕಾಏಖಿ ದಾಳಿ ನಡೆಸಿ ಕಚ್ಚಿದೆ ಎಂದು ವರದಿಯಾಗಿದೆ.

ಭಾರ್ಗವ್, ಅವರ ತಾಯಿ ಮತ್ತು ಅವರ ಹಾಸಿಗೆಯಲ್ಲಿ ಮಲಗಿದ್ದ ತಂದೆಗೆ ನಾಯಿ ಕಚ್ಚಿದೆ, ನಂತರ ಕುಟುಂಬದವರು ಮಾಹಿತಿ ನೀಡಿದ ನಂತರ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ (ಜಿವಿಎಂಸಿ) ಸಿಬ್ಬಂದಿ ಇವರನ್ನು ಕರೆದೊಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು.

ಹೆಚ್ಚಿನ ಸುದ್ದಿ