Sunday, July 7, 2024
Homeಚುನಾವಣೆ 2023B L SANTOSH : ಈಗ ಏನು ಹೇಳುತ್ತೀರಿ ಸರ್‌...? ಪ್ರಿಯಾಂಕ್‌ ಖರ್ಗೆಗೆ ಒನ್‌...

B L SANTOSH : ಈಗ ಏನು ಹೇಳುತ್ತೀರಿ ಸರ್‌…? ಪ್ರಿಯಾಂಕ್‌ ಖರ್ಗೆಗೆ ಒನ್‌ ಲೈನ್‌ ತಿರುಗೇಟು

ಬೆಂಗಳೂರು : ಬಿಜೆಪಿ (BJP)ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದು ಕಾಂಗ್ರೆಸ್‌(Congress leaders) ನಾಯಕರಿಗೆ ಉತ್ತರ ಕೊಡಲು ಬಿಜೆಪಿ ಸನ್ನದ್ಧವಾಗಿ ನಿಂತಿದೆ. ಕೆಲ ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್‌ ಮಾಡಿದ್ದು, ಅವರ ಹೇಳಿಕೆಗೆ ಈಗ ಬಿ ಎಲ್‌ ಸಂತೋಷ್‌ ಶಾರ್ಪ್‌ ತಿರುಗೇಟು ನೀಡಿದ್ದಾರೆ.

 

ಪಂಚ ರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಫೋಟೊಗಳೇ ರಾರಾಜಿಸುತ್ತಿದೆ , ಆದರೆ ಪ್ರಧಾನಿ ಮೋದಿ ಮಾತ್ರ ಕಾಣುತ್ತಿಲ್ಲ, ಬಿಜೆಪಿ ನಾಳಿನ ಚುನಾವಣೆ ಸೋಲೊದು ಪಕ್ಕಾ ಎನಿಸುತ್ತಿದೆ ಎಂದು ಟ್ವಿಟ್‌ ಮಾಡಿದ್ದರು.

ಈ ಟ್ವಿಟ್‌ಗೆ ತಿರುಗೇಟು ನೀಡಲು ಸಮಯಕ್ಕಾಗಿ ಕಾದಿದ್ದ ಬಿಜೆಪಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಂಕ ಖರ್ಗೆ ಟ್ವೀಟ್‌ನ್ನು ರೀ ಟ್ವೀಟ್‌ ಮಾಡಿ ಈಗ ಏನು ಹೇಳುತ್ತೀರಿ ಸರ್‌ ಎಂದು ಪೋಸ್ಟ್‌ ಮಾಡಿದ್ದಾರೆ.

ಸದ್ಯ ಪಂಚ ರಾಜ್ಯ ಚುನಾವಣಾ ಫಲಿತಾಂಶ ರಾಜ್ಯ ಬಿಜೆಪಿಗೆ ಉತ್ಸಾಹ ಹೆಚ್ಚಿಸಿದೆ.

 

ಹೆಚ್ಚಿನ ಸುದ್ದಿ