ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಸಿರೀಷ್ ಭರದ್ವಾಜ್ ನಿಧನರಾಗಿದ್ದಾರೆ
ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಮೃತರಾದರು.
ಈ ಬಗ್ಗೆ ನಟಿ ಶ್ರೀರೆಡ್ಡಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆರ್ಐಪಿ ಎಂದು ಬರೆದುಕೊಂಡಿರುವ ನಟಿ ಶ್ರೀರೆಡ್ಡಿ ಇನ್ನಾದರೂ ನಿನಗೆ ಶಾಂತಿ ದೊರಕಲಿ. ಎಲ್ಲರೂ ನಿನಗೆ ಮೋಸ ಮಾಡಿದರು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
Rest in peace sirish pic.twitter.com/nins1IqxNt
— Sri Reddy (@SriReddyTalks) June 19, 2024
ಚಿರಂಜೀವಿ ಅವರ ಮಗಳು ಶ್ರೀಜಾ ಮತ್ತು ಸಿರೀಷ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಚಿರಂಜೀವಿ ಕುಟುಂಬದ ವಿರೋಧದ ನಡುವೆಯೂ ಈ ಜೋಡಿ 2007 ರಲ್ಲಿ ಮನೆ ತೊರೆದು ಹೋಗಿ ಮದುವೆಯಾಗಿದ್ದರು. ನಂತರ 2014ರಲ್ಲಿ ಮದುವೆ ಮುರಿದು ಬಿದ್ದು ಶ್ರೀಜಾ ಅವರು ಉದ್ಯಮಿ ಕಲ್ಯಾಣ್ ದೇವ್ ಎಂಬುವವರ ಕೈ ಹಿಡಿದಿದ್ದಾರೆ.