Sunday, July 7, 2024
Homeಟಾಪ್ ನ್ಯೂಸ್GRUHALAKSHMI : ಖಾತೆಗೆ ಬಾರದ ಎರಡು ಸಾವಿರ ರೂ. - ಸರ್ಕಾರದ ವಿರುದ್ದ ಗೃಹಲಕ್ಷ್ಮಿಯರು ಕಿಡಿ!

GRUHALAKSHMI : ಖಾತೆಗೆ ಬಾರದ ಎರಡು ಸಾವಿರ ರೂ. – ಸರ್ಕಾರದ ವಿರುದ್ದ ಗೃಹಲಕ್ಷ್ಮಿಯರು ಕಿಡಿ!

ಕೋಲಾರ : ಲೋಕ ಸಭಾ ಚುನಾವಣೆಯ ನಂತರ ಗೃಹಲಕ್ಷ್ಮೀ ಹಣವೇ ಬಂದಿಲ್ಲ ಎಂದು ಕೋಲಾರದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದರು, ಆದರೆ ದಿಢೀರ್ ಅಂತ ಹಣ ಹಾಕೋದು ನಿಲ್ಲಿಸಿ ಬಿಟ್ಟಿದ್ದಾರೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತೀವಿ ಎಂದು ನಿಲ್ಲಿಸಿದ್ದಾರೆ. ಈಗ ನಮಗೆ ಕೂಲಿ ಮಾಡೊದು ತಪ್ಪಿಲ್ಲ ಎಂದು ಒಂದೆಡೆ ಮಹಿಳೆಯರು ಆಕ್ರೋಶ ಹೊರಹಾಕಿದರೆ, ಇನ್ನೊಂದೆಡೆ ವಿಧವಾ ಪ್ರೋತ್ಸಾಹ ಧನ, ಹಿರಿಯ ನಾಗರೀಕರ ಪಿಂಚಣಿ ಹಣವೂ ಜಮಾ ಮಾಡಿಲ್ಲ ಎಂದು ವೃದ್ದರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.

ಇಷ್ಟೇ ಅಲ್ಲದೇ ಕೋಲಾರ ಜಿಲ್ಲೆಯ ಕೆಲೆವಡೆ  ಕಳೆದ ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಗ್ರಾಮೀಣ ಭಾಗದ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಹೀಗಿರುವಾಗ 2 ಸಾವಿರ ಹಣಕ್ಕಾಗಿ ಯಾರನ್ನ ಕೇಳುವುದು ಎಂದು ಮಹಿಳೆಯರ ಬೇಸರ ವ್ಯಕ ಪಡಿಸಿದ್ದಾರೆ. 

ಹೆಚ್ಚಿನ ಸುದ್ದಿ