ಕೋಲ್ಕತ್ತ: ವೈದ್ಯರ ಎಡವಟ್ಟಿನಿಂದ ಮೆಟಿಯಾಬ್ರೂಜ್ನಲ್ಲಿರುವ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ 25 ರೋಗಿಗಳಿಗೆ ಕಣ್ಣಿನ ಸೋಂಕು ತಗುಲಿದೆ.
ಕಳೆದ ಶುಕ್ರವಾರ ಮತ್ತು ಶನಿವಾರದಂದು ರೋಗಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆ ಪರಿಣಾಮ 25 ರೋಗಿಗಳು ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಶಸ್ತ್ರ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸೋಂಕು ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೋಂಕಿನ ಕಾರಣವನ್ನು ಕಂಡುಹಿಡಿಯಲು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾದ ಎಲ್ಲಾ ಉಪಕರಣಗಳನ್ನು ಪರೀಕ್ಷಿಸುತ್ತಿದ್ದು, ಎಲ್ಲಾ 25 ರೋಗಿಗಳನ್ನು ನೇತ್ರಶಾಸ್ತ್ರದ ಪ್ರಾದೇಶಿಕ ಸಂಸ್ಥೆಗೆ ವರ್ಗಾಯಿಸಲಾಗಿದೆ.