Sunday, July 7, 2024
Homeಕ್ರೀಡೆVIRAL NEWS : ಕಳ್ಳ ಬೇಟೆಗಾರರಿಗೆ ಕಚ್ಚಿದ ಹಾವು - ಯಾರ ಹತ್ರ ಹೇಳೊದು ನೋವು!

VIRAL NEWS : ಕಳ್ಳ ಬೇಟೆಗಾರರಿಗೆ ಕಚ್ಚಿದ ಹಾವು – ಯಾರ ಹತ್ರ ಹೇಳೊದು ನೋವು!

ಚಾಮರಾಜನಗರ : ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡು ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಅದ ಘಟನೆ ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದಿದೆ.

ಹನೂರು ತಾಲೂಕಿನ ಮರಿಯ ಮಂಗಲ ಗ್ರಾಮದ ಸೆಲ್ವನಾಥ್, ವಿನ್ಸೆಂಟ್, ಲೂಯಿಸ್ ಬಂಧಿತ ಆರೋಪಿಗಳು ಎನ್ನಲಾಗಿದೆ. 

ಆರೋಪಿಗಳು ನಿನ್ನೆ ರಾತ್ರಿ ಕಾವೇರಿ ವನ್ಯಧಾಮದಲ್ಲಿ ಜಿಂಕೆ, ಸಾರಂಗದ ಬೇಟೆಗೆ ಮೂವರು ಕಾಡುಗಳ್ಳರು ಹೋಗಿದ್ದರು, ಈ ವೇಳೆ ಲ್ವನಾಥ್ ಎಂಬಾತನಿಗೆ ಹಾವು ಕಚ್ಚಿದೆ.

ಹಾವು ಕಚ್ಚುತ್ತಿದ್ದಂತೆ ಕಾಡಿನಿಂದ ಆಚೆ ಬರುವ ವೇಳೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಆರೋಪಿಗಳನ್ನು ಕೂಡಲೇ  ಬಂಧಿಸಿದ್ದಾರೆ. ಬಂಧಿತರಿಂದ ಎರಡು ನಾಡ ಬಂದೂಕು, ಟಾರ್ಚ್ ಮಚ್ಚು ಜಪ್ತಿ ಮಾಡಲಾಗಿದೆ. 

ಸದ್ಯ ಹಾವು ಕಚ್ಚಿದ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದು, ಮಿಕ್ಕ ಆರೋಪಿಗಳನ್ನ ಅರಣ್ಯ ಇಲಾಖಾ ಸಿಬ್ಬಂದಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆಚ್ಚಿನ ಸುದ್ದಿ