Sunday, July 7, 2024
Homeಟಾಪ್ ನ್ಯೂಸ್BJP: ಶಪಥ ಪೂರ್ಣ: ಪೇಟ ತೆಗೆದು ಶ್ರೀರಾಮನಿಗೆ ಸಮರ್ಪಿದ ಬಿಹಾರ ಡಿಸಿಎಂ ; VIDEO

BJP: ಶಪಥ ಪೂರ್ಣ: ಪೇಟ ತೆಗೆದು ಶ್ರೀರಾಮನಿಗೆ ಸಮರ್ಪಿದ ಬಿಹಾರ ಡಿಸಿಎಂ ; VIDEO

ಅಯೋಧ್ಯೆ: ಬಿಹಾರದ (Bihar) ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Choudhary) ಅವರು 22 ತಿಂಗಳ ನಂತರ ಅಯೋಧ್ಯೆಯಲ್ಲಿ (Ayodhya) ತಮ್ಮ ಪೇಟವನ್ನು ತೆಗೆದು ಶ್ರೀರಾಮನಿಗೆ ಸಮರ್ಪಿಸುವ ಮೂಲಕ ಶಪಥವನ್ನು ಪೂರ್ಣಗೊಳಿಸಿದ್ದಾರೆ.

ಬುಧವಾರ ಬೆಳಗ್ಗೆ ಸರಯು ನದಿಯಲ್ಲಿ ಸ್ನಾನ ಮಾಡಿ, ಕೇಶಮುಂಡನ ಮಾಡಿಸಿ ಸಾಂಕೇತಿಕವಾಗಿ ಕಳೆದ 22 ತಿಂಗಳಿಂದ ಧರಿಸಿದ್ದ ಪೇಟವನ್ನು ಶ್ರೀರಾಮನಿಗೆ ಅರ್ಪಿಸಿದರು. ಈ ವೇಳೆ ಬೆಂಬಲಿಗರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಚೌದರಿ, ಅಂದು ನಾನು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ವಾಗ್ದಾನ ಮಾಡಿದ್ದ ನಿಜ. ಆದರೆ ಅವರು ಇಂಡಿಯಾ ಮೈತ್ರಿಕೂಟವನ್ನು ತೊರೆದು ನಮ್ಮ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದಾರೆ. ನಾನು ಪೇಟ ಅರ್ಪಿಸುವ ಸಮಯ ಬಂದಿದೆ ಎಂದು ಹೇಳಿದರು.

ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಡಿಎಗೆ ಮರಳಿದ ದಿನವೇ ನಾನು ಭಗವಾನ್ ರಾಮನಿಗೆ ಈ ಪೇಟವನ್ನು ಸಮರ್ಪಿಸುವುದಾಗಿ ಘೋಷಿಸಿದ್ದೇನೆ. ಹೀಗಾಗಿ ಇಂದು ನನ್ನ ಪೇಟವನ್ನು ಭಗವಾನ್ ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ್ದೇನೆ ಎಂದರು.

ಹೆಚ್ಚಿನ ಸುದ್ದಿ