ವೆಸ್ಟ್ ಇಂಡಿಸ್: ಭಾರತ ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಭಾವುಕರಾಗಿದ್ದಾರೆ. ಇದು ಅವರ ಕೋಚ್ ಅವಧಿಯ ಕಡೆಯ ಪ್ರವಾಸವಾಗಿತ್ತು.
ಸಂಭ್ರಮಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಒಬ್ಬ ಆಟಗಾರನಾಗಿ, ನಾನು ಈ ಹಿಂದೆ ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ. ಆದರೆ ನಾನು ನನ್ನ ಅತ್ಯುತ್ತಮವಾದುದನ್ನು ಪಂದ್ಯಗಳಲ್ಲಿ ನೀಡಿದ್ದೇನೆ .
ನಾನು ಕೋಚ್ ಆಗಿ ಈ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ, ಕೋಚ್ ಆಗಿ ನಾನು, ಎಲ್ಲ ಶ್ರಮ ಹಾಕಿದ್ದೇನೆ. ಹಾಗಾಗಿ ಇದು ನನ್ನ ಉತ್ತಮ ಪ್ರಯಾಣ ಎಂದು ದ್ರಾವಿಡ್ ಹೇಳಿದ್ದಾರೆ. ”
#WATCH | On India winning T20 World Cup 2024, Team India Head Coach Rahul Dravid says, ” As a player, I was not lucky enough to win a trophy but I gave my best…I was lucky enough to be given an opportunity to coach a team, I was lucky that this bunch of boys made it possible… pic.twitter.com/aKKCh9XIYV
— ANI (@ANI) June 30, 2024