Sunday, July 7, 2024
Homeಕ್ರೀಡೆT-20 World Cup : ಇದು ನನ್ನ ಅದೃಷ್ಟ..! : ರಾಹುಲ್ ದ್ರಾವಿಡ್ ಭಾವುಕ ಪ್ರತಿಕ್ರಿಯೆ

T-20 World Cup : ಇದು ನನ್ನ ಅದೃಷ್ಟ..! : ರಾಹುಲ್ ದ್ರಾವಿಡ್ ಭಾವುಕ ಪ್ರತಿಕ್ರಿಯೆ

ವೆಸ್ಟ್ ಇಂಡಿಸ್: ಭಾರತ ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಭಾವುಕರಾಗಿದ್ದಾರೆ. ಇದು ಅವರ ಕೋಚ್ ಅವಧಿಯ ಕಡೆಯ ಪ್ರವಾಸವಾಗಿತ್ತು.

ಸಂಭ್ರಮಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಒಬ್ಬ ಆಟಗಾರನಾಗಿ, ನಾನು ಈ ಹಿಂದೆ ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ. ಆದರೆ ನಾನು ನನ್ನ ಅತ್ಯುತ್ತಮವಾದುದನ್ನು ಪಂದ್ಯಗಳಲ್ಲಿ ನೀಡಿದ್ದೇನೆ .

ನಾನು ಕೋಚ್ ಆಗಿ ಈ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ, ಕೋಚ್ ಆಗಿ ನಾನು, ಎಲ್ಲ ಶ್ರಮ ಹಾಕಿದ್ದೇನೆ. ಹಾಗಾಗಿ ಇದು ನನ್ನ ಉತ್ತಮ ಪ್ರಯಾಣ ಎಂದು ದ್ರಾವಿಡ್ ಹೇಳಿದ್ದಾರೆ. ”

ಹೆಚ್ಚಿನ ಸುದ್ದಿ