ಹಾವೇರಿ : ಜನ ಮರುಳೋ.. ? ಜಾತ್ರೆ ಮರುಳೋ…? ಈ ಮಾತು ಈ ಚಡ್ಡಿ ಡಾಕ್ಟರ್ ವಿಚಾರಕ್ಕೆ ಸರಿಯಾಗಿ ಒಪ್ಪುತ್ತೆ..!
ಹಾವೇರಿಯಲ್ಲಿ ಮೂಡನಂಬಿಕೆಗಳು ಎಲ್ಲೆ ಮೀರಿದ್ದು, ನಾನು ಮುಟ್ಟಿದ್ರೆ ಅನಾರೋಗ್ಯ ದೂರವಾಗುತ್ತೆಂದು ಎಂದು ಹೇಳಿಕೊಳ್ಳುವ ಡಾಕ್ಟರ್ ಒಬ್ಬ ಪ್ರತ್ಯಕ್ಷವಾಗಿದ್ದಾನೆ
ಜಿಲ್ಲೆಯ ಗುತ್ತಲ ಗ್ರಾಮದ ಸುತ್ತ ಮುತ್ತ ತಾನೊಬ್ಬ ಆಯುರ್ವೇದ ವೈದ್ಯ, ಆರೋಗ್ಯ ಭಾಗ್ಯ ನೀಡುವ ಭಗವಂತನೆಂದು ಜನರಿಗೆ ಟೋಪಿ ಹಾಕುತ್ತಿದ್ದು, ಮೈ ಮುಟ್ಟಿ ರೋಗವನ್ನು ದೂರ ಮಾಡುತ್ತೇನೆ ಎನ್ನುತ್ತಿದ್ದಾನೆ
ನಿಜಕ್ಕೂ ಈ ಚಡ್ಡಿ ಡಾಕ್ಟರ್ ಕಾಯಿಲೆ ವಾಸಿ ಮಾಡ್ತಾನೋ ಬಿಡ್ತಾನೋ ಗೊತ್ತಿಲ್ಲ.. ಆದ್ರೆ ಇಲ್ಲಿನ ಜನ ಮಾತ್ರ ಎದ್ನೋ ಬಿದ್ನೋ ಅಂತ ಈ ಆಸಾಮಿಯ ಬಳಿ ಚಿಕಿತ್ಸೆಗೆ ಬರ್ತಿರೋದು ಮಾತ್ರ ವಿಚಿತ್ರವಾದರೂ ಸತ್ಯ.
ಟಾನಿಕ್ ಇಲ್ಲ.. ಮಾತ್ರೆ ಇಲ್ಲ.. ಈತನ ಟ್ರೀಟ್ಮೆಂಟ್ ಇಷ್ಟೇ. ಬರೀ ಜ್ಯೂಸ್ ಕುಡಿಸಿ ಕ್ಷಣಾರ್ಧಲ್ಲೇ ನೋವನ್ನು ದೂರ ಮಾಡ್ತಾನಂತೆ.. ಅದೇನೋ ಗೊತ್ತಿಲ್ಲ ಒಂದು ಹೆಂಗಸಿಗೆ ಮುತ್ತು ಕೊಟ್ಟೇ ರೋಗ ವಾಸಿ ಮಾಡಿಬಿಟ್ಟ ಈ ವ್ಯಕ್ತಿಯ ವಿಡಿಯೋ ಎಲ್ಲೆಡೆ ಹರಿದಾಡ್ತಿದೆ.
ಅದಷ್ಟೇ ಅಲ್ಲ ಇನ್ನೂ ಕಾಯಿಲೆ ಏನಾದರೂ ಹೆಚ್ಚಿದ್ದರೆ ಈತನಿಂದ ಒಂದೆರಡು ಪೆಟ್ಟು ತಿಂದ್ರೆ ಕಾಯಿಲೆ ಮಂಗಮಾಯ ಆಗುತ್ತೆ ಅಂತಿದ್ದಾರೆ ಇಲ್ಲಿನ ಜನ ಜನರೇ ಮಂಕಾಗಿದ್ದಾರೋ.. ಅಥವಾ ಈತನೇ ಜನರನ್ನು ಮಂಕು ಮಾಡುತ್ತಿದ್ದಾನೋ ಗೊತ್ತಿಲ್ಲ.
ವೈದ್ಯಕೀಯ ಕ್ಷೇತ್ರ ಇಷ್ಟಲ್ಲಾ ಮುಂದುವರೆದಿದ್ದರೂ ಹಳ್ಳಿಗಾಡಿನ ಮುಗ್ಧ ಜನ ಇಂಥ ನಕಲಿ ವೈದ್ಯರು.., ಸ್ವಾಮಿಗಳನ್ನು ನಂಬುತ್ತಿರೋದು ಮಾತ್ರ ವಿಪರ್ಯಾಸ