ಬೆಂಗಳೂರು: ಸಿಎಂ ಸ್ಥಾನ ಬದಲಾವಣೆ ಬಗ್ಗೆ ಯಾವ ಚರ್ಚೆಯೂ ಇಲ್ಲ. ಮುಂದಿನ ಐದು ವರ್ಷ ಸಿದ್ದರಾಮಯ್ಯನವರೇ (Siddaramaiah) ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸಚಿವ ಎಚ್.ಸಿ. ಮಹದೇವಪ್ಪ (H C Mahadevappa) ಹೇಳಿದ್ದಾರೆ.ಕಾಂಗ್ರೆಸ್ (Congress) ಪಕ್ಷದಲ್ಲಿ ಈಗ ಸಿಎಂ ಚರ್ಚೆಯೇ ಈಗ ಅನವಶ್ಯಕ ಎಂದಿರುವ ಮಹದೇವಪ್ಪ, ಸಿಎಂ ಬದಲಾವಣೆಯ ಬಗ್ಗೆ ಎಲ್ಲೂ ಸಹ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ.
ಪರಮೇಶ್ವರ್ (Dr G Parameshwar) ಅವರೂ ಕೂಡ ಸಿಎಂ ರೇಸಿನಲ್ಲಿ ಇದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಅವರು ಸಿಎಂ ಆಗೋದಿಲ್ಲ. ಹಾಗೆ ಹೇಳಿದವರಿಗೆ ಬುದ್ದಿ ಇಲ್ಲ ಎಂದು ಟೀಕಿಸಿದರು.
ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುವಾಗ ಬದಲಾವಣೆ ಹೇಗ್ ಸಾಧ್ಯ ಎಂದು ಪ್ರಶ್ನಿಸಿರುವ ಮಹದೇವಪ್ಪ, ನಿನ್ನೆ ಪರಮೇಶ್ವರ್ ಅವರು ಕೇವಲ ಊಟಕ್ಕೆ ಕರೆದಿದ್ದರು. ಊಟ ಮಾಡಿಕೊಂಡು ಬಂದಿದ್ದೇವೆ. ಅದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು .