Sunday, July 7, 2024
Homeಕ್ರೈಂSandalwood: ನಟ ದರ್ಶನ್, ಯುವರಾಜ್‌ ಕುಮಾರ್‌ ಪ್ರಕರಣ ಇಂದು ವಿಚಾರಣೆ

Sandalwood: ನಟ ದರ್ಶನ್, ಯುವರಾಜ್‌ ಕುಮಾರ್‌ ಪ್ರಕರಣ ಇಂದು ವಿಚಾರಣೆ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಇಂದು ಮಹತ್ವದ ದಿನವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಹಾಗೂ ದೊಡ್ಡಮನೆಯ ಕುಟುಂಬದ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ದಾಂಪತ್ಯ ಕಲಹದ ಬಗ್ಗೆಯೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ನಟ ದರ್ಶನ್ ಪವಿತ್ರಾ ಗೌಡ ಹಾಗೂ ಸಹಚರರ ನ್ಯಾಯಾಂಗ ಬಂಧನ ಇಂದು‌ ಅಂತ್ಯವಾಗಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈಗಾಗಲೇ ಬಹುತೇಕ ತನಿಖೆ ಮುಗಿಸಿರುವ ಪೊಲೀಸರರು ಮಹತ್ವದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹಾಗಾಗಿ ನಟ ದರ್ಶನ್ ಭವಿಷ್ಯ ಇಂದು ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ.

ಮತ್ತೊಂದೆಡೆ ಕೌಟುಂಬಿಕ ನ್ಯಾಯಾಲಯಕ್ಕೆ ವಿದೇಶದಲ್ಲಿದ್ದ ಶ್ರೀದೇವಿ ಬೈರಪ್ಪ ವಿಚ್ಛೇದನ ಅರ್ಜಿ ವಿಚಾರಣೆಗೆ ಹಾಜರಾಗಲಿದ್ದಾರೆ. ಯುವ ರಾಜಕುಮಾರ್ ವಿಚ್ಛೇದನಕ್ಕೆ ಅರ್ಜಿ .ಸಲ್ಲಿಸುವುದಕ್ಕೂ ಮೊದಲು ಶ್ರೀದೇವಿ ವಿದೇಶ ಪ್ರವಾಸ ಕೈಗೊಂಡಿದ್ದರು.
ಯುವ ರಾಜಕುಮಾ‌ರ್ ಡಿವೋರ್ಸ್‌ ಅರ್ಜಿಯ ವಿಚಾರ ತಿಳಿದು ವಿದೇಶದಿಂದಲೇ ಪ್ರತಿಕ್ರಿಯೆ ಕೂಡ ನೀಡಿದ್ದರು. ವಿಚ್ಛೇದನದ ಅರ್ಜಿಯಲ್ಲಿ ಮಾಡಿದ್ದ ಆರೋಪಗಳಿಗೂ ಉತ್ತರಿಸಿದ್ದ ಶ್ರೀದೇವಿ ಅವರು ಯುವ ರಾಜಕುಮಾ‌ರ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರು.
ದಾಂಪತ್ಯ ಕಲಹಕ್ಕೆ ತಮ್ಮ ಪತ್ನಿ ಶ್ರೀದೇವಿ ಅವರ ಮಾನಸಿಕ ಕ್ರೌರ್ಯವೇ ಕಾರಣ ಎಂದು ಯುವರಾಜ್ ಕುಮಾ‌ರ್ ಆರೋಪ ಹೊರಿಸಿದ್ದರು.
ಈ ಕಡೆ ಶ್ರೀದೇವಿ ಭೈರಪ್ಪ ತಮ್ಮ ಗಂಡನಿಗೆ ಅನೈತಿಕ ಸಂಬಂಧ ಇದೆ ಅಂದಿದ್ದರು.
ಒಟ್ಟಿನಲ್ಲಿ ಕೌಟುಂಬಿಕ ಕಲಹದ ಅಂತಿಮ ನಿರ್ಧಾರ ನ್ಯಾಯಾಲಯದ ಕಟ್ಟೆಯಲ್ಲಿ ನಿರ್ಣಯವಾಗಲಿದೆ.

ಹೆಚ್ಚಿನ ಸುದ್ದಿ