ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವಿನ ನಂತರ ಟೀಮ್ ಇಂಡಿಯಾ ತನ್ನ 13 ವರ್ಷಗಳ ಕಪ್ ಬರಗಾಲವನ್ನು ನಿಗಿಸಿದ್ದು, ಕೋಟ್ಯಾಂತರ ಅಭಿಮಾನಿಗಳನ್ನು ನಿರಾಶೆಯ ಕಡಲಿಗೆ ನೂಕಿದ್ದ ಟೀಂ ಇಂಡಿಯಾ ಇಂದು ಮತ್ತೆ ಎದೆಯುಬ್ಬಿಸಿ ನಡೆಯುವಂತೆ ಮಾಡಿದೆ.
ಈ ಗೆಲುವಿನ ಸವಿ ನೆನಪಿಗಾಗಿ ನಾಯಕ ರೋಹಿತ್ ಶರ್ಮ ಅವರು ಪಿಚ್ನ ಒಂದು ಚಿಟಿಕೆ ಮಣ್ಣು ಬಾಯಿಗೆ ಹಾಕಿಕೊಂಡಿದ್ದು, ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.
View this post on Instagram
ಫುಟ್ಬಾಲ್, ಟೆನಿಸ್ ಸೇರಿದಂತೆ ಕೆಲ ಕ್ರೀಡೆಯಲ್ಲಿ ಚಾಂಪಿಯನ್ ಅದ ತಂಡದ ಕೆಲ ಆಟಗಾರರು ಮೈದಾನ ಹುಲ್ಲು ಅಥವಾ ತಮ್ಮ ಶೂ ನಲ್ಲಿ ಬಿಯರ್ ಕುಡಿಯುವ ಮೂಲಕ ಗೆಲುವುವನ್ನು ಮತ್ತು ಈ ಮೈದಾನದ ಋಣವನ್ನು ತೀರಿಸಿಕೊಳ್ಳುತ್ತಾರೆ.
ಇದೇ ರೀತಿ ರೋಹಿತ್ ಕೂಡ ಕಪ್ ಗೆದ್ದ ಬಳಿಕ ಪಿಚ್ನಿಂದ ಒಂದು ಚಿಟಿಕೆ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಜೀವಮಾನದ ಈ ಸಾಧನೆಗೆ ಕಾರಣವಾದ ಕೆರಿಬಿಯನ್ ದ್ವೀಪ ರಾಷ್ಟ್ರಕ್ಕೆ ಧನ್ಯತೆ ಅರ್ಪಿಸಿದರು.