Sunday, July 7, 2024
Homeಕ್ರೈಂRenukaswamy murder case : ದರ್ಶನ್ ಪರ ನಿಂತ ನಟಿ ಸೋನು ಗೌಡ!

Renukaswamy murder case : ದರ್ಶನ್ ಪರ ನಿಂತ ನಟಿ ಸೋನು ಗೌಡ!

ಬೆಂಗಳೂರು: ನಟ ದರ್ಶನ್​ ಜೈಲಿಗೆ ಹೋದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ನನಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂದು ಸೋನುಗೌಡ ಹೇಳಿಕೊಂಡಿದ್ದಾರೆ.  ಕನ್ನಡದ ಬಿಗ್​ ರಿಯಾಲಿಟಿ ಬಿಗ್​ಬಾಸ್​ ಒಟಿಟಿ ಸೀಸನ್ 1ಕ್ಕೆ ಎಂಟ್ರಿ ಕೊಟ್ಟಿದ್ದ ಸೋನು ಶ್ರೀನಿವಾಸ ಗೌಡ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದರ ಮಧ್ಯೆ ನೆಚ್ಚಿನ ನಟ ಜೈಲು ಸೇರಿದ ಹಿನ್ನೆಲೆಯಲ್ಲಿ ಸೋನು ಗೌಡ ಬೇಸರ ಹೊರ ಹಾಕಿದ್ದಾರೆ.  ಹಾಗೂ ಆ ಅಕೌಂಟ್​ನಿಂದ ನನಗೂ ಅಶ್ಲೀಲ ಮೆಸೇಜ್ ಬಂದಿದೆ ಅಂತ ಯ್ಯೂಟೂಬ್​ ಚಾನೆಲ್​ನಲ್ಲಿ ಬೇಸರ ವ್ಕಕ್ತ ಪಡಿಸಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ಸೋನು ಗೌಡ, ಈ ಅಕೌಂಟ್​ನಿಂದ ಸಾಕಷ್ಟು ಹುಡುಗಿಯರಿಗೆ ಈತ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ನಾನೂ ನನ್ನ ಫೋನ್​ನಲ್ಲಿ ಚೆಕ್​ ಮಾಡಿದೆ. ಆಗ ನನಗೂ ಆತ ಮೆಸೇಜ್​ ಮಾಡಿದ್ದ. ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದ್ರೆ ಸುಮ್ಮನೆ ಇರ್ತೀರಾ? ಎಂದು ಸೋನು ಆಕ್ರೋಶ ಹೊರಹಾಕಿದ್ದಾರೆ.

ಹೆಚ್ಚಿನ ಸುದ್ದಿ