Sunday, July 7, 2024
Homeಕ್ರೈಂRenukaswamy Murder: ರೇಣುಕಾಸ್ವಾಮಿ ಮೊಬೈಲ್‌ ಡಾಟಾ ರಿಟ್ರೀವ್‌ ಗೆ ಪೊಲೀಸ್‌ ಸಿದ್ಧತೆ

Renukaswamy Murder: ರೇಣುಕಾಸ್ವಾಮಿ ಮೊಬೈಲ್‌ ಡಾಟಾ ರಿಟ್ರೀವ್‌ ಗೆ ಪೊಲೀಸ್‌ ಸಿದ್ಧತೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯಾಗಿ ಹಲವು ದಿನ ಕಳೆದರೂ ಮೊಬೈಲ್‌ ಮಾತ್ರ ಇನ್ನೂ ಸಿಕ್ಕಿಲ್ಲ. ಕೊಲೆ ಪ್ರಕರಣದಲ್ಲಿ ಮೊಬೈಲ್‌ ಪ್ರಮುಖ ಸಾಕ್ಷ್ಯವಾಗುವ ಕಾರಣ ಪೊಲೀಸರು ಎಲ್ಲಾ ಕಡೆ ಆತನ ಮೊಬೈಲ್‌ ಹುಡುಕುತ್ತಿದ್ದಾರೆ.
ಆರೋಪಿಗಳು ರಾಜಕಾಲುವೆ ಬಳಿ ಶವ ಎಸೆದ ಕಾರಣ ಪೌರ ಕಾರ್ಮಿಕರನ್ನು ರಾಜಕಾಲುವೆಗೆ ಇಳಿಸಿ ಮೊಬೈಲ್‌ ಹುಡುಕಿಸಲಾಗುತ್ತಿದೆ. ಇದರ ಜೊತೆ ರೇಣುಕಾಸ್ವಾಮಿ ಹೆಸರಲ್ಲಿ ಹೊಸ ಸಿಮ್‌ ಖರೀದಿಸಿ ಡಾಟಾ ರಿಟ್ರೀವ್‌ ಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ ರೇಣುಕಾಸ್ವಾಮಿ ಮೊಬೈಲ್‌ ನಲ್ಲಿನ ಎಲ್ಲ ಮೆಸೇಜ್‌ ಮತ್ತು ವಾಟ್ಸಾಪ್‌ ಚ್ಯಾಟ್‌ ಸಿಕ್ಕರೆ ದರ್ಶನ್‌ ಮತ್ತು ಗ್ಯಾಂಗ್‌ ಗೆ ಶಿಕ್ಷೆ ಇನ್ನಷ್ಟು ಕಠಿಣವಾಗಲಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ರೇಣುಕಾಸ್ವಾಮಿ ಇನ್ಸ್ಟಾಗ್ರಾಂ ಖಾತೆಯಿಂದ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದ ಕಾರಣ ಪೊಲೀಸರು ಇನ್ಸ್ಟಾಗ್ರಾಂಗೂ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಹೆಚ್ಚಿನ ಸುದ್ದಿ