Sunday, July 7, 2024
Homeಕ್ರೈಂDarshan arrest : ಪೊಲೀಸ್‌ ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ದರ್ಶನ್‌ - ಜೈಲೂಟ...

Darshan arrest : ಪೊಲೀಸ್‌ ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ದರ್ಶನ್‌ – ಜೈಲೂಟ ಗ್ಯಾರೆಂಟಿ!

ಬೆಂಗಳೂರು :  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಹತ್ಯೆ ಯಲ್ಲಿ ತನ್ನ ಪಾತ್ರದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಶಕ್ಕೆ ನೀಡಿರುವ ರಿಮ್ಯಾಂಡ್‌ ಕಾಪಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

remand copy

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದನೆಂಬ ಆರೋಪದ ಮೇಲೆ ದರ್ಶನ್‌ ಮತ್ತು ಆತನ ಗ್ಯಾಂಗ್‌ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್‌ ನೀಡಿರುವ ಸ್ವಇಚ್ಛಾ ಹೇಳಿಕೆ ಈಗ ಬಹಿರಂಗಗೊಂಡಿದೆ.

ಕೊಲೆ ನಡೆದ ಬಳಿಕ ಪ್ರಕರಣದಲ್ಲಿ ಎಲ್ಲಿಯೂ  ತನ್ನ ಹೆಸರು ಬರದಂತೆ ಮಾಡಲು ನಾನು ಎ 14 ಆರೋಪಿ ಪ್ರದೋಶ್‌ ಗೆ 30 ಲಕ್ಷ ರೂ. ಕೊಟ್ಟಿದೆ. ಈ ಹಣದಲ್ಲಿ ಪೊಲೀಸರು, ಲಾಯರ್‌ ಮತ್ತು ಶವ ವಿಲೇವಾರಿಯ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ನಟ ದರ್ಶನ್‌ ಸ್ವಇಚ್ಛಾ ಹೇಳಿಕೆ ದಾಖಲಿಸಿದ್ದಾರೆ.

ದರ್ಶನ್‌ ಹೇಳಿಕೆ ಪಡೆದ ಬಳಿಕ ಪೊಲೀಸರು ಪ್ರದೋಶ್‌ ಮನೆಯಿಂದ ದರ್ಶನ್‌ ನೀಡಿದ್ದ ಹಣವನ್ನು ವಶಪಡಿಸಿಕೊಂಡಿದ್ದರು.

ಹೆಚ್ಚಿನ ಸುದ್ದಿ