ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ ಜೈಲು ಸೇರಿ 10 ದಿನ ಕಳೆದಿದೆ.
ನಿನ್ನೆ ಬಾಡೂಟ ಸೇವಿಸಿದ ದರ್ಶನ್ ಪುಸ್ತಕದ ಮೊರೆ ಹೋಗಿದ್ದರು. ಭಾನುವಾರ ರಜಾ ಇರೋ ಕಾರಣ ದರ್ಶನ್ ಭೇಟಿಗೆ ಯಾರಿಗೂ ಎಂಟ್ರಿ ಇರಲಿಲ್ಲ.
ಇಂದು ಸೋಮವಾರದ ಹಿನ್ನಲೆ ದರ್ಶನ್ ಭೇಟಿಗೆ ಕುಟುಂಬಸ್ಥರು ಜೈಲಿಗೆ ಬರುವ ಸಾಧ್ಯತೆಯಿದ್ದು ಕುಟುಂಬಸ್ಥರನ್ನು ನೋಡಲು ದರ್ಶನ್ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೇಶ್ ಈ ದಿನವೂ ಸಹ ಬರುವ ಸಾಧ್ಯತೆ ಹೆಚ್ಚಿದೆ ಎನ್ನಾಲಾಗುತ್ತಿದೆ.