ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ್ ಜೈಲು ಸೇರಿ 8 ದಿನ ಪೂರ್ಣಗೊಂಡಿದೆ.
ಊಟೋಪಚಾರ ಹಾಗೂ ಮತ್ತಿತರ ವಿಷಯಗಳಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಯಾವುದೇ ವಿಶೇಷ ಸವಲತ್ತು ನೀಡಬಾರದೆಂದು ಆದೇಶಿಸಲಾಗಿತ್ತು. ಹೀಗಾಗಿ ಜೈಲಿನಲ್ಲಿಯೂ ಸಹ ದರ್ಶನ್ಗೆ ಐಷಾರಾಮಿ ಸೌಲಭ್ಯಗಳು ಲಭ್ಯವಾಗಿಲ್ಲ.
ಎಲ್ಲಾ ಕೈದಿಗಳಿಗೆ ನೀಡುತ್ತಿರುವ ಆಹಾರವನ್ನೇ ದರ್ಶನ್ ಗೆ ನೀಡಲಾಗುತ್ತಿದ್ದು, ಕೋರಿಕೆಯ ಮೇರೆಗೆ ಬಿಸಿನೀರು ನೀಡಲಾಗುತ್ತಿದೆ. ಊಟ ತಿಂಡಿಗಳಿಗೆ ಹೊಂದಿಕೊಳ್ಳಲಾರದೇ ದರ್ಶನ್ ಗ್ಯಾಂಗ್ ಜೈಲಿನಲ್ಲಿ ಚಡಪಡಿಸುತ್ತಿದೆ ಎನ್ನಲಾಗಿದೆ.
ಕೊಲೆ ಆರೋಪ ಹೊತ್ತು ಜೈಲು ಸೇರಿದ ಬಳಿಕ ದರ್ಶನ್ ಯಾರೊಂದಿಗೂ ಹೆಚ್ಚಿನ ಮಾತುಕತೆ ಇಲ್ಲದೆ ಮೌನವಾಗಿದ್ದಾರೆ. ಜೈಲಿನಲ್ಲಿ ಪತ್ನಿ ಹಾಗೂ ಮಗನನ್ನು ನೋಡಿ ಭಾವುಕರಾಗಿದ್ದ ಅವರು ಈಗ ಸ್ವಲ್ಪ ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಿತ್ಯವೂ ನಾನ್ ವೆಜ್ ಸೇವಿಸುತ್ತಿದ್ದ ದರ್ಶನ್ ನಿನ್ನೆ ರಾತ್ರಿ ಜೈಲಿನ ಮೆನು ಪ್ರಕಾರ ಚಪಾತಿ ಊಟ ಸವಿದಿದ್ದಾರೆ. ಊಟದ ನಂತರ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ನಿದ್ರೆ ಮಾಡಿದ್ದಾರೆ. ಹಾಗೆಯೇ ಇಂದು ಬೆಳಗ್ಗೆ ಅಧಿಕಾರಿಗಳು ನೀಡಿದ್ದ ಪುಳಿಯೋಗರೆ ಸೇವಿಸಿದ್ದಾರೆ.
ತನ್ನ ಅಭಿಮಾನಿಗಳಿಗೆ ಜೈಲಿನಿಂದಲೇ ಸಂದೇಶ ನೀಡಿದ ದರ್ಶನ್, ನನ್ನ ಬೇಟಿಗಾಗಿ ಯಾರು ಸಹ ಬರಬಾರದೆಂದು ಜೈಲಧಿಕಾರಿಗಳ ಮೂಲಕ ಸಂದೇಶ ನೀಡಿದ್ದಾರೆ.