Sunday, July 7, 2024
Homeಕ್ರೈಂRenukaswamy Case : ಪವಿತ್ರಾಗೌಡ ಜೈಲಿನಲ್ಲಿ ಹೇಗಿದ್ದಾರೆ..? ಲಾಯರ್​ ಏನಂದ್ರು?

Renukaswamy Case : ಪವಿತ್ರಾಗೌಡ ಜೈಲಿನಲ್ಲಿ ಹೇಗಿದ್ದಾರೆ..? ಲಾಯರ್​ ಏನಂದ್ರು?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ ನಲ್ಲಿ ನಟ ದರ್ಶನ್​ ಆಪ್ತೆ ಪವಿತ್ರಾಗೌಡ A1 ಆರೋಪಿಯಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಈ ಬಗ್ಗೆ ಪವಿತ್ರಾಗೌಡ ಪರ ವಕೀಲರಾದ ನಾರಾಯಣಸ್ವಾಮಿ ಅವರು ಮಾತನಾಡಿ, ನ್ಯಾಯಾಂಗ ಬಂಧನದಲ್ಲಿ ಎಲ್ಲರೂ ಚೆನ್ನಾಗಿ ಇರುತ್ತಾರೆ. ಹಿಂಸೆ  ಕೊಡಲೆಂದು ಯಾರನ್ನು ಜೈಲಿಗೆ ಕರೆದುಕೊಂಡು ಬರಲ್ಲ. ಮನಃ ಪರಿವರ್ತನೆಗಾಗಿ ಜೈಲಿಗೆ ಕಳುಹಿಸಲಾಗುತ್ತದೆ. ಎಲ್ಲಾ ಕೈದಿಗಳಂತೆ ಪವಿತ್ರಾಗೌಡ ಸಹ ಜೈಲಲ್ಲಿ ಇದ್ದಾರೆ ಎಂದರು.

Pavitra Gowda

ಇನ್ನು ಜಾಮೀನು ಅರ್ಜಿ ಸಲ್ಲಿಸಲು ಕಾಯುತ್ತಿದ್ದೇವೆ. ಜು.4ರ ಬಳಿಕ ಜಾಮೀನು ಅರ್ಜಿ ಸಲ್ಲಿಕೆಗೆ ಚಿಂತನೆ ಮಾಡಿದ್ದಾಗಿ ವಕೀಲು ಹೇಳಿದರು. ಈ ಬಗ್ಗೆ ಚರ್ಚಿಸಲೆಂದೇ ಪವಿತ್ರಾಗೌಡಗೆ ಭೇಟಿಯಾಗಿರುವುದಾಗಿ ಜೈಲಿನ ಬಳಿ ನಾರಾಯಣಸ್ವಾಮಿ ಮಾಹಿತಿ ನೀಡಿದರು. ಪ್ರಕರಣದಿಂದಾಗಿ ಪವಿತ್ರಾಗೌಡ ಅವರು ಈಗಲೂ ಶಾಕ್​​ ನಲ್ಲಿದ್ದಾರೆ ಎಂದು ವಿವರಿಸಿದರು.

ಹೆಚ್ಚಿನ ಸುದ್ದಿ