Sunday, July 7, 2024
Homeಕ್ರೈಂDarshan arrest : ರೇಣುಕಾಸ್ವಾಮಿ ಕೊಲೆ ಆರೋಪಿಗಳ ಮನೆ ಮಹಜರ್‌ - ಇನ್ನಷ್ಟು ಪಾತಕಗಳು...

Darshan arrest : ರೇಣುಕಾಸ್ವಾಮಿ ಕೊಲೆ ಆರೋಪಿಗಳ ಮನೆ ಮಹಜರ್‌ – ಇನ್ನಷ್ಟು ಪಾತಕಗಳು ಬಯಲು!

ಬೆಂಗಳೂರು : ಚಿತ್ರನಟ ದರ್ಶನ್‌ ಮತ್ತು ಗ್ಯಾಂಗ್‌ ನಿಂದ ನಡೆದಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮನೆಯನ್ನು ಪೊಲೀಸರು ಇಂದು ಮಹಜರ್‌ ಮಾಡಿದ್ದಾರೆ. ಬನಶಂಕರಿಯಲ್ಲಿರುವ ಪವನ್ ಮನೆಯಲ್ಲಿ ಹಾಗೂ ಕೃತ್ಯ ನಡೆದ ಶೆಡ್‌ ನಲ್ಲಿ ಪೊಲೀಸರು ಮಹಜರ್‌ ನಡೆಸಿದ್ದು, ಆರೋಪಿಗಳ ಇನ್ನಷ್ಟು ಕುಕೃತ್ಯಗಳು ಬಯಲಾಗಿವೆ.

ಶವವನ್ನು ಸಾಗಿಸಿದ್ದ ಸ್ಕಾರ್ಪಿಯೋ ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಇದೇ ಕಾರಿನಲ್ಲಿ ಕೊಲೆ ಬಳಿಕ
ಆ ಕಾರನ್ನು ಪುನೀತ್ ನೀಡುವಾಗ ಆತನಿಗೆ ಎಲ್ಲವೂ ಗೊತ್ತಿತ್ತು ಎನ್ನೋದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಕೊಲೆ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಇದ್ದ ರಕ್ತದ ಕಲೆ ತೊಳೆಸಿದ್ದ ಹೇಮಂತ್ , ವಾಶಿಂಗ್ ಸೆಂಟರ್ ನಲ್ಲೂ ಕಾರನ್ನು ಶುಚಿಗೊಳಿಸಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಾರ್‌ ತೊಳೆದರೂ ಸಹ ಕಾರಿನ  ಕಾರ್ಪೆಟ್ ಒಳಭಾಗದಲ್ಲಿ ರಕ್ತದ ಕಲೆಗಳು‌ ಹಾಗೂ ರಕ್ತದ ತುಣುಕುಗಳು ಪತ್ತೆಯಾಗಿದ್ದು, ಅದನ್ನು ಎಫ್‌ಎಸ್‌ಎಲ್‌ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಇಷ್ಟೇ ಅಲ್ಲದೇ ಶವ ಸಾಗಿಸಿದ ಸ್ಕಾರ್ಪಿಯೋ ಕಾರಿನ ಗುರುತು ಸಿಗಬಾರದೆಂದು ಅದರ ಮೇಲೆ  ಅಂಟಿಸಲಾಗಿದ್ದ ಡಿಬಾಸ್‌ ಹಾಗೂ ದರ್ಶನ್‌ ಭಾವಚಿತ್ರದ ಸ್ಟಿಕರ್‌ ಅನ್ನು ಆರೋಪಿಗಳು ತೆಗೆಸಿಹಾಕಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.

ಹೆಚ್ಚಿನ ಸುದ್ದಿ