ಬೆಂಗಳೂರು : ರೌಡಿ ಶೀಟರ್ ಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava award) ನೀಡಿ ಗೌರವಿಸಿದ್ದ ಮೈಸೂರು ಜಿಲ್ಲಾಡಳಿತ (Mysore district administration) ವಿವಾದ ಭುಗಿಲೇಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದೆ. ರೌಡಿ ಶೀಟರ್ ಅಶೋಕ್ ಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್ ಪಡೆಯುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (Kannada and culture department) ಸಹಾಯಕ ನಿರ್ದೇಶಕ ಸುದರ್ಶನ್ ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕಡೆಯ ಕ್ಷಣದಲ್ಲಿ ಎಂಕೆ ಅಶೋಕ್ ಹೆಸರು ಸೇರಿಸಲಾಗಿತ್ತು. ಮ. 1 ರಂದು ನಡೆದ ಭರ್ಜರಿ ಸಮಾರಂಭದಲ್ಲಿ ಖುದ್ದು ಸಚಿವ ಎಚ್.ಸಿ ಮಹದೇವಪ್ಪ ಅವರೇ ರೌಡಿಶೀಟರ್ ಗೆ ಪ್ರಶ್ತಿ ಪ್ರದಾನ ಮಾಡಿದ್ದರು. ಬಳಿಕ ಆತ ಮಾತ್ರವಲ್ಲದೇ ಅವನ ಮಗನೂ ಸಹ ರೌಡಿಶೀಟರ್ ಎಂದು ತಿಳಿದುಬಂದಿತ್ತು. ರೌಡಿ ಕುಟುಂಬದ ಯಾವ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ತೂರಿಬಂದಿತ್ತು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಬಿಜೆಪಿ ನಾಯಕ ಯತ್ನಾಳ್, ಕೊತ್ವಾಲನ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ ಎಂದು ಟೀಕಿಸಿದ್ದರು.
ಕೊತ್ವಾಲನ (ಕು)ಖ್ಯಾತ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ ..ಈತ ರೌಡಿ ಶೀಟರ್ ಎಂಬುದು ಗೊತ್ತಿದ್ದೂ ಸಹ ರಾಜ್ಯೋತ್ಸವ ಕೊಟ್ಟಿದ್ದು ಯಾರ ಒತ್ತಡದ ಮೇರೆಗೆ ಎಂದು ಜಿಲ್ಲಾಡಳಿತ ಬಹಿರಂಗಪಡಿಸಲಿ…ಪ್ರಶಸ್ತಿಯ ಪಾವಿತ್ರ್ಯತೆ ಹಾಳು ಮಾಡಿದ ಜಿಲ್ಲಾಡಳಿತ, ಹಾಗೂ ಕೆಲ ಪಟ್ಟಭದ್ರಹಿತಾಸಕ್ತಿಗಳು 'ಸಾಂಸ್ಕೃತಿಕ… pic.twitter.com/IPvpCUZq2Y
— Basanagouda R Patil (Yatnal) (@BasanagoudaBJP) November 22, 2023