ಬೆಂಗಳೂರು: ದೊಡ್ಮನೆ ಮಗ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದಂಪತಿಗಳ ವಿವಾಹ ವಿಚ್ಚೇದನೆ ಅರ್ಜಿ ವಿಚಾರಣೆ ಇಂದು ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು.
ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ ೨೩ಕ್ಕೆಮುಂದೂಡಿ ಆದೇಶ ನೀಡಿದೆ.
ಜೂನ್ 6 ರಂದು ವಿವಾಹ ವಿಚ್ಚೇದನ ಕೋರಿ ಯುವರಾಜ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಪತ್ನಿ ಶ್ರೀದೇವಿ ಭೈರಪ್ಪ ವಿದೇಶದಲ್ಲಿದ್ದ ಹಿನ್ನಲೆ ವಿಚಾರಣೆಗೆ ಕಾಲಾವಕಾಶ ಕೋರಿದ್ದರು.
ವಿದೇಶದಿಂದ ವಾಪಾಸಾದ ಹಿನ್ನಲೆ ಇಂದು ಶಸ್ರೀದೇವಿ ಹಾಗೂ ಯುವರಾಜ್ ಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.