ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹಿಂದೂಗಳ ವಿರುದ್ಧದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಗರ್ವದಿಂದ ಹೇಳುತ್ತಿದ್ದೇನೆ ನಾನೊಬ್ಬ ಹಿಂದೂ,. ಈ ದೇಶದಲ್ಲಿ ಕೋಟ್ಯಾಂತರ ಜನ ಹಿಂದೂ ಎಂದು ಹೇಳಿಕೊಳ್ಳಲು ಅತ್ಯಂತ ಹೆಮ್ಮೆ ಇದೆ. ನಾನು ಸುಳ್ಳು ಹೇಳೋದಿಲ್ಲ, ಮೋಸ ಮಾಡುವುದಿಲ್ಲ. ನಾವ್ಯಾರೂ ಹಿಂಸಕರಲ್ಲ ಎಂದು ವಿಡಿಯೋ ಮೂಲಕ ಮುತಾಲಿಕ್ ರಾಹುಲ್ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೀವು ಕೋಟಿ ಕೋಟಿ ಹಿಂದೂಗಳಿಗೆ ಅವಮಾನ ಮಾಡಿದ್ದೀರಿ. ಹಿಂದೂ ಧರ್ಮ ಯಾವತ್ತೂ ಹಿಂಸಾಚಾರ ಬೋಧಿಸಿಲ್ಲ. ಸರ್ವೇ ಜನ ಸುಕಿನೋ ಭವಂತು, ಎಲ್ಲರೂ ಸಂತೋಷದಿಂದಿರಿ ಎಂದು ಹೇಳಿದ ಏಕೈಕ ಧರ್ಮ ಹಿಂದೂ. ಹಿಂದೂಗಳು ಸಹಿಷ್ಣುತೆ ಇಂದಿದ್ದಾರೆ. ಅವರು ಅತ್ಯಂತ ಶ್ರೇಷ್ಟವಾದ ವಿಚಾರ ಧಾರೆಯನ್ನು ಜಗತ್ತಿಗೆ ಪ್ರಸಾರ ಮಾಡುತ್ತಾರೆ.
ಹಿಂದೂ ದೇವ, ದೇವತೆಗಳ ವಿರುದ್ಧ ಯಾವಾಗಲೂ ಅಪಮಾನ ಮಾಡಬೇಡಿ. ಹಿಂದೂ ಧರ್ಮದ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಎಂದು ಪ್ರಮೋದ್ ಮುತಾಲಿಕ ರಾಹುಲ್ ಗಾಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.