ನವದೆಹಲಿ: ವಿಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ. ಆದರೆ ತಮ್ಮ ಭಾಷಣದ ವೇಳೆ ಶಿವನ ಫೋಟೋ ಬಳಸಿದ ಪರಿಣಾಮ ಈ ಭಾಷಣ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ವಿವಾದ ಎಕ್ಸ್ ನಲ್ಲಿ ಪಪ್ಪು ಎಂದು ಟ್ರೆಂಡ್ ಆಗಿದೆ.
ಮಾತಿನ ಭರದಲ್ಲಿ ರಾಹುಲ್ ವಿನಾಕಾರಣ ವಿವಾದ ಮೈಗೆಳೆದುಕೊಂಡಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳುವವರು 24 ಗಂಟೆ ಹಿಂಸೆ, ದ್ವೇಷ, ಸುಳ್ಳನ್ನು ಹರಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆ ವೇಳೆ, ಮಧ್ಯ ಪ್ರವೇಶಿಸಿದ ಪ್ರಧಾನಿ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಚಾರ ಎಂದು ಹೇಳಿದ್ದರು.
ತಪ್ಪಿನ ಅರಿವಾದ ರಾಹುಲ್ ಗಾಂಧಿ, ನಾನು ಹೇಳಿದ್ದು ಬಿಜೆಪಿ, ಆರ್ಎಸ್ಎಸ್, ಮೋದಿ ಮಾತ್ರ ಹಿಂದೂಗಳಲ್ಲ ಎಂದು ಸ್ಪಷ್ಟನೆ ನೀಡಿದ್ದರು. ರಾಹುಲ್ ಅವರ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ (ಎಕ್ಸ್) ನಲ್ಲಿ ಸಮರ್ಥಿಸಿಕೊಂಡಿದ್ದಾರೆ.