Sunday, July 7, 2024
Homeಟಾಪ್ ನ್ಯೂಸ್RAHUL GANDHI: ರಕ್ಷಣಾ ಸಚಿವರು ದೇಶದ ಕ್ಷಮೆ ಯಾಚಿಸಲಿ : ರಾಹುಲ್ ಗಾಂಧಿ

RAHUL GANDHI: ರಕ್ಷಣಾ ಸಚಿವರು ದೇಶದ ಕ್ಷಮೆ ಯಾಚಿಸಲಿ : ರಾಹುಲ್ ಗಾಂಧಿ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಹುತಾತ್ಮ ಯೋಧ ಅಗ್ನಿವೀರ್ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ತಿಳಿಸಿದರು.

ಎಕ್ಸ್‌ನಲ್ಲಿ ಅಗ್ನಿವೀರ್‌ (Agniveer) ಬಗ್ಗೆ ಮಾತನಾಡಿರುವ ಅವರು, ಸತ್ಯದ ರಕ್ಷಣೆ ಪ್ರತಿಯೊಂದು ಧರ್ಮದ ಆಧಾರವಾಗಿದೆ. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಯೋಧ ಅಗ್ನಿವೀರ್ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು.

ಹುತಾತ್ಮ ಯೋಧ ಅಗ್ನಿವೀರ್ ಅಜಯ್ ಸಿಂಗ್ ಅವರ ಸುಳ್ಳುಗಳ ಬಗ್ಗೆ ಅವರ ತಂದೆಯೇ ಸತ್ಯವನ್ನು ಹೇಳಿದ್ದಾರೆ. ರಕ್ಷಣಾ ಸಚಿವರು ಸಂಸತ್ತು, ದೇಶ, ಸೇನೆ ಮತ್ತು ಹುತಾತ್ಮ ಅಗ್ನಿವೀರ್ ಅಜಯ್ ಸಿಂಗ್ ಅವರ ಕುಟುಂಬದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.