Sunday, July 7, 2024
Homeಟಾಪ್ ನ್ಯೂಸ್BREAKING: ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ಮಾಪಕ

BREAKING: ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ ನಿರ್ಮಾಪಕ

ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ, ಚಕ್ರ ಬಡ್ಡಿ ದಂಧೆ ಹೆಚ್ಚಾಗಿದ್ದು, ದಂಧೆಕೋರರ ಕಿರುಕುಳಕ್ಕೆ ಖ್ಯಾತ ಸ್ಯಾಂಡಲ್‌ವುಡ್‌ ನಿರ್ಮಾಪಕರೊಬ್ಬರು ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿ ಪ್ರಶಸ್ತಿ ಪಡೆದುಕೊಡಿರುವ ಖ್ಯಾತ ಚಿತ್ರ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ (pushkara mallikarjunaiah) ಅವರಿಗೆ ದಂಧೆಕೋರರ ಕಾಟ ಶುರುವಾಗಿದೆ. ಪುಷ್ಕರ್ ಅವರು ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಹಾಗೂ ಅವತಾರ ಪುರುಷ ಭಾಗ ಎರಡು ಚಿತ್ರ ನಿರ್ಮಿಸಿ ಖ್ಯಾತಿ ಪಡೆದಿದ್ದಾರೆ. ಆದರೆ ಈ ಚಿತ್ರಗಳ ನಿರ್ಮಾಣಕ್ಕೆ ಐದು ಕೋಟಿ ಹಣ ಸಾಲ ಪಡೆದಿದ್ದರು.

ಆದರ್ಶ್, ಹರ್ಷ, ಶಿವು ಹಾಗು ಹರ್ಷ ಡಿ ಎಂಬುವರಿಂದ ಸಾಲ ಪಡೆದಿದ್ದರು. ಆದರೆ ಈ‌ ಮೂರು ಚಿತ್ರಗಳು ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ 5 ಕೋಟಿಗೆ ಇದುವರೆಗೆ ಬಡ್ಡಿ ಸೇರಿ 11 ಕೋಟಿ ಕಟ್ಟಿದ್ದರಂತೆ. ಆದರೂ ಇನ್ನೂ ಹದಿಮೂರು ಕೋಟಿ ಕಟ್ಟಿ ಎಂದು ದುಂಬಾಲು ಹಾಕಿದ್ದಾರೆ.

ನಿರ್ಮಾಪಕ ಪುಷ್ಕರ್‌ ಅವರು ಹಣ ಕಟ್ಟದಿದ್ದಾಗ ಹುಡುಗರನ್ನು ಕರೆಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಘಟನೆಯ ಹಿನ್ನೆಲೆಯಲ್ಲಿ ಪುಷ್ಕರ್‌ ಅವರು ಸಹಕಾರ ಸಂಘದ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಉಪನಿಬಂಧಕರಾದ ಕಿಶೋರ್ ಕುಮಾರ್ ಅವರಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಸಿಸಿಬಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಮನಿ ಲಾಂಡ್ರಿಂಗ್ ಆರೋಪದಡಿ ಎಫ್ಐ‌ಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ