ಕೋಲಾರ : ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಂಗಡಿಗರು ಜೈಲು ಪಾಲಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ. ಹಲವು ನಟನಟಿಯರು ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ ಭೇಟಿಯಾಗಿದ್ದರೆ, ಇನ್ನೂ ಕೆಲವು ನಟನಟಿಯರು ಸಾಮಾಜಿಕ ಜಾಲತಾಣದ ಮೂಲಕ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ನಿರ್ಮಾಪಕ ಉಮಾಪತಿ ಗೌಡ ಈ ಕುರಿತು ಪ್ರತಿಕ್ರಿಸಿದ್ದಾರೆ. ನಾವೆಲ್ಲರೂ ದೇವರನ್ನು ಪೂಜಿಸುತ್ತೇವೆ. ಅದೇ ರೀತಿ ದೆವ್ವವನ್ನು ಪೂಜಿಸುವ ವರ್ಗವೂ ಒಂದಿರುತ್ತೆ ಎಂದು ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಈ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ದೇವರನ್ನು ಪೂಜಿಸುತ್ತೇವೆಯೋ ಅಥವಾ ದೆವ್ವವನ್ನು ಪೂಜಿಸುತ್ತೇವೆಯೋ ಅವರವರ ಆಯ್ಕೆಗೆ ಬಿಟ್ಟಿದ್ದು ಎಂದರು.
ನಟ ದರ್ಶನ್ ಈ ಹಿಂದೆ ನಿರ್ಮಾಪಕ ಉಮಾಪತಿ ಗೌಡ ಸೇರಿದಂತೆ ಹಲವರೊಡನೆ ವಿವಾದವೆಬ್ಬೆಸಿಕೊಂಡಿದ್ದಷ್ಟೇ ಅಲ್ಲದೇ ಪರಸ್ಪರ ಅವಹೇಳನಕಾರಿ ಹೇಳಿಕೆಗಳೊಂದಿಗೆ ಇಬ್ಬರೂ ವಾಗ್ಯುದ್ದ ನಡೆಸಿದ್ದರು.