ಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ ಅವರಿಗೆ ಖೈದಿ ಸಂಖ್ಯೆ 6106 ನೀಡಲಾಗಿತ್ತು. ಇದೀಗ ದರ್ಶನ್ ಅಭಿಮಾನಿಗಳು ಇದೇ ನಂಬರ್ ಅನ್ನೇ ತಮ್ಮ ಲಕ್ಕಿ ನಂಬರ್ ಎಂದು ಭಾವಿಸತೊಡಗಿದ್ದಾರಂತೆ.
ತಮ್ಮ ‘ಡಿ’ ಬಾಸ್ಗೆ ಸಿಕ್ಕಿರುವ ಈ ನಂಬರ್ ಅನ್ನೇ RTO ನಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ.
ಈ ಖೈದಿ ಸಂಖ್ಯೆ 6106 ನಂಬರ್ಗೆ ಇದೀಗ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆಯಂತೆ. ಇದಕ್ಕೆ ಪುಷ್ಟಿ ಎಂಬಂತೆ, ಬನ್ನೂರಿನ ದರ್ಶನ್ ಅವರ ಅಪ್ಪಟ ಅಭಿಮಾನಿ ಧನುಷ್ ಎಂಬಾತ, ದರ್ಶನ್ಗೆ ಜೈಲಿನಲ್ಲಿ ನೀಡಿದ್ದ ಇದೇ ನಂಬರ್ ಅನ್ನೇ ನೋಂದಣಿ ಮಾಡಿಸಲು ಮುಂದಾಗಿದ್ದಾರೆ.
ಬಳಿಕ ಮಾತನಾಡಿದ ಧನುಷ್, ತಮ್ಮ ‘ಡಿ’ ಬಾಸ್ ಜೈಲಿನಿಂದ ರಿಲೀಸ್ ಆದರೆ, ದೇವರಿಗೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದಾಗಿ ಕಣ್ಣೀರು ಹಾಕುತ ಹೇಳಿಕೊಂಡಿದ್ದಾರೆ. ಸದ್ಯ ದರ್ಶನ್ ಅಭಿಮಾನಿಗಳು ‘6106’ ನಂಬರಿನ ಆಕರ್ಷಣೆಗೆ ಒಳಗಾಗುತ್ತಿದ್ದಾರೆಂದೂ ವಿಶ್ಲೇಷಿಸಲಾಗುತ್ತಿದೆ.