Sunday, July 7, 2024
Homeಚುನಾವಣೆ 2023PRAJWAL RETURN : ವಿಮಾನ ನಿಲ್ದಾಣದಲ್ಲಿ ಎಸ್ ಐಟಿ ಅಧಿಕಾರಿಗಳ ಕಣ್ಗಾವಲು 

PRAJWAL RETURN : ವಿಮಾನ ನಿಲ್ದಾಣದಲ್ಲಿ ಎಸ್ ಐಟಿ ಅಧಿಕಾರಿಗಳ ಕಣ್ಗಾವಲು 

ಬೆಂಗಳೂರು : ಪ್ರಜ್ವಲ್ ಆಗಮನದ ಸಾಧ್ಯತೆ ಹಿನ್ನಲೆಯಲ್ಲಿ SIT ಟೀಮ್ ಸಾಕಷ್ಟು ಮುನ್ನೆಚರಿಕಾ ಕ್ರಮ ಕೈಗೊಂಡಿದ್ದರೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಏರ್ ಪೊರ್ಟ್ ಹೊರಗೆ ಕೂಡ ನಿಗಾ ಇರಿಸಲಾಗಿದೆ ಹಾಗೂ ಪ್ರಜ್ವಲ್ ರನ್ನ ಬಂಧಿಸಿ ಕರೆತರಲು ಮೂರು ತಂಡಗಳು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಒಂದು ವೇಳೆ  ಪ್ರಜ್ವಲ್ ರೇವಣ್ಣ ಬಂದಲ್ಲಿ ಏರ್ ಪೋರ್ಟ್ ಬಳಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈಗಾಗಲೇ ಸ್ಥಳೀಯ ಪೊಲೀಸರ ಜೊತೆ ಸೂಕ್ತ ಬಂದೋಬಸ್ತ್ ಗೆ ಎಸ್ ಐಟಿ ಸೂಚನೆ ಕೊಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲಿಗೆ ಏರ್ ಪೋರ್ಟ್ ಅಧಿಕಾರಿಗಳು ಪ್ರಜ್ವಲ್ ರನ್ನ ವಶಕ್ಕೆ ಪಡೆದು, ಬಳಿಕ SIT ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇಂದು ರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರಲ್ಲಿದ್ದು, ಅವರನ್ನು ಬಂಧಿಸಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.

ಹೆಚ್ಚಿನ ಸುದ್ದಿ