ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ , ಆಪ್ತೆ ಪವಿತ್ರಾಗೌಡ ಜೈಲು ಸೇರಿ ಮೂರು ದಿನಗಳಾಗಿವೆ. ದರ್ಶನ್ ಪರಪ್ಪನ ಅಗ್ರಹಾರದ ಜೈಲುಕೋಣೆಯಲ್ಲಿ ಮಂಕಾಗಿ ಕುಳಿತಿದ್ದಾರೆ. ಸರಿಯಾಗಿ ಊಟ ,ನಿದ್ರೆ ಮಾಡಿಲ್ಲ ಎಂದು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ದರ್ಶಬ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ದರ್ಶನ್ ಮಗನನ್ನು ತಬ್ಬಿ ಭಾವುಕರಾಗಿದ್ದರು. ಅವರು ವಾಪಾಸಾದ ಬಳಿಕವೂ, ಪತ್ನಿ ಹಾಗೂ ಮಗನ ಗುಂಗಿನಿಂದ ದರ್ಶನ್ ಹೊರಬಂದಿರಲಿಲ್ಲ . ಆ ಬಳಿಕ ರಾತ್ರಿಯಿಡೀ ದರ್ಶನ್ ಭಾವುಕರಾಗಿದ್ದರು ಎನ್ನಲಾಗಿದೆ. ಗೆಳೆಯ ವಿನೋದ್ ಪ್ರಭಾಕರ್ ಭೇಟಿ ನೀಡಿದ ವೇಳೆಯೂ ದರ್ಶನ್ ಮಂಕಾಗಿದ್ದರು.
ಮತ್ತೊಂದೆಡೆ ಎ 1 ಆರೋಪಿ ಪವಿತ್ರಾ ಗೌಡ ಕೂಡ ಬೇಸರದಲ್ಲೇ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಪವಿತ್ರ ಗೌಡ ತಂದೆ ತಾಯಿ ಹಾಗೂ ಮಗಳು ಜೈಲಿಗೆ ಬಂದು ಹೋಗಿ ನಾಲ್ಕು ದಿನ ಕಳೆದಿದೆ. ಹೀಗಾಗಿ ಪವಿತ್ರಾ ಮಗಳ, ತಾಯಿಯ ಯೋಚನೆಯಲ್ಲೇ ಕೊರಗಿದ್ದಾರೆ.