ನೀಟ್ ಮತ್ತು ಇತರೆ ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ಕೆಲ ವಿದ್ಯಾರ್ಥಿಗಳ ಸಂಘಟನೆಗಳು ಇಂದು ದೇಶಾದ್ಯಂತ ಶಿಕ್ಷಣ ಸಂSಥೆಗಳ ಬಂದ್ ಗೆ ಕರೆ ನೀಡಿದೆ. ಎಸ್ ಎಫ್ ಐ, ಎಐಎಸ್ ಎಫ್, ಪಿಡಿಎಸ್ ಯು ಇನ್ನಿತರ ವಿದ್ಯಾರ್ಥಿ ಸಂಘಟನೆಗಳು ಶಾಲಾ-ಕಾಲೇಜುಗಳಿಗೆ ತೆರಳಿ ಬಂದ್ ನೋಟೀಸ್ ನೀಡಿದವು. ಇಂದು ಖಾಸಗಿ ಶಾಲಾ-ಕಾಲೇಜು ಬಂದ್ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಈಗಾಗಲೇ ಮೆಸೇಜ್ ಹೋಗಿದೆ.
ನೀಟ್ ಪತ್ರಿಕೆ ಸೋರಿಕೆ ಸಂಬಂಧ ಲಾತೂರ್ನಲ್ಲಿ ಪ್ರಕರಣ ದಾಖಲಾಗಿದ್ದು, ಆರು ದಿನಗಳ ಪೊಲೀಸ್ ತನಿಖೆಯ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣದ ಸಂಚುಕೋರ ಎನ್ನಲಾದ ಅಮನ್ ಸಿಂಗ್ ನನ್ನು ಸಿಬಿಐ ಬುಧವಾರ ಜಾರ್ಖಂಡ್ ನ ಧನ್ ಬಾದ್ ನಿಂದ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಏಳನೇ ಆರೋಪಿಯನ್ನು ಬಂಧಿಸಿದೆ.