ಬೆಂಗಳೂರು : ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದನ್ನು ಬಿದಿರಿನಿಂದ ಅಲಂಕರಿಸಲು ಬಿಎಂಆರ್ಸಿಎಲ್ ಮುಂದಾಗಿದೆ
ಈ ನಿಲ್ದಾಣ ದೇಶದಲ್ಲೇ ಮೊದಲನೆಯ ನಿಲ್ದಾಣವಾಗಿರಲಿದ್ದು, ಇದಕ್ಕಾಗಿ ಮೆಟ್ರೋ ನಿಗಮ 5-6 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ
ಈ ಯೋಜನೆಯಡಿ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯಿಂದ ಮೀನಾಕ್ಷಿ ದೇವಸ್ಥಾನದವರೆಗೂ ಮೆಟ್ರೋ ಪಿಲ್ಲರ್ ಹಸಿರೀಕರಣ ಹಾಗೂ ನಿಲ್ದಾಣಕ್ಕೆ ಬಿದಿರನ ಅಲಂಕಾರಗೊಳ್ಳಲಿದೆ.
ತ್ರಿಪುರಾದ ಬಂಬುಸಾ ತುಲ್ಡಾ ಮರವನ್ನು ನಿಲ್ದಾಣದ ಅಲಂಕಾರಕ್ಕಾಗಿ ಬಳಸಲಾಗುವುದು ಎಂದು ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಎನ್.ಮೂರ್ತಿ ತಿಳಿಸಿದ್ದಾರೆ
ಈ ಯೋಜನೆಗಳ ನಿರ್ಮಾಣವು ಮುಂದಿನ ಮೂರು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಮೆಟ್ರೋ ನಿಲ್ದಾಣದ ಅಭಿವೃದ್ಧಿ ಮತ್ತು ಹಸಿರೀಕರಣಕ್ಕೆ ಹಣವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಪಡೆಯಲಾಗುವುದು ಎಂದು ಮೆಟ್ರೋ ತಿಳಿಸಿದೆ.