ಮುಂಬೈ: ಇತ್ತೀಚೆಗೆ ತನ್ನ ಅಂಗರಕ್ಷಕನಿಂದ ತಳ್ಳಲ್ಪಟ್ಟ ವಿಕಲಚೇತನನನ್ನು ತೆಲುಗಿನ ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಭೇಟಿಯಾಗಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ತಮ್ಮ ಬಾಡಿಗಾರ್ಡ್ ವಿಕಲಚೇತನ ಅಭಿಮಾನಿಯೊಬ್ಬರನ್ನು ತಳ್ಳಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಘಟನೆ ಬಳಿಕ ನಾಗರ್ಜುನ ಅವರೇ ಎಕ್ಸ್ ಮೂಲಕ ವಿಕಲಚೇತನ ಅಭಿಮಾನಿಗೆ ಕ್ಷಮೆ ಕೇಳಿದ್ದರು. ಇಂದು ಅಭಿಮಾನಿಯನ್ನು ಭೇಟಿ ಮಾಡಿ ಅಪ್ಪುಗೆ ನೀಡಿದ್ದಾರೆ.
ಈ ವೇಳೇ ಆ ಘಟನೆಯಲ್ಲಿ ನಿನ್ನ ತಪ್ಪು ಇರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ ಎಂದು ಹೇಳಿರುವ ನಾಗಾರ್ಜುನ, ಇತರೆ ಅಭಿಮಾನಿಗಳ ಜೊತೆಗೂ ಫೋಟೊ ಕ್ಲಿಕ್ಕಿಸಿಕೊಂಡು ವಿಮಾನನಿಲ್ದಾಣದ ಒಳಗೆ ತೆರಳಿದ್ದಾರೆ.
Nagarjuna met up with the man who was rudely pushed away by his bodyguard earlier.. Nice.. In SM era, nobody can afford such bad PR.. pic.twitter.com/qnLhlWbWlP
— Keh Ke Peheno (@coolfunnytshirt) June 26, 2024
ಘಟನೆಯೇನು?
ಇತ್ತೀಚೆಗೆ ನಾಗಾರ್ಜುನ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯೊಬ್ಬರು ಓಡೋಡಿ ಬಂದಿದ್ದರು. ಆದರೆ ಅವರನ್ನು ನಾಗಾರ್ಜುನ ಬಾಡಿಗಾರ್ಡ್ ತಳ್ಳಿ ಬೀಳಿಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.
Where has humanity gone? #nagarjuna pic.twitter.com/qnPjJngIxM
— Viral Bhayani (@viralbhayani77) June 23, 2024
ವೈರಲ್ ಆಗಿರುವ ವಿಡಿಯೋ ನೋಡಿ ನಾಗಾರ್ಜುನ ಪ್ರತಿಕ್ರಿಯಿಸಿ ಇದು ಈಗ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ ಎಂದು ನಾಗಾರ್ಜುನ ಅವರು ಭರವಸೆ ನೀಡಿದ್ದರು.