ಬೆಂಗಳೂರು: ನಗರದ ಕಾಕ್ಸ್ ಟೌನ್ ಸಮೀಪ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಜಿತ್ (25) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ತಡರಾತ್ರಿ ಮಾರಕಾಸ್ತ್ರದಿಂದ ಬಡಿದು ಕೊಲ್ಲಲಾಗಿದೆ. ಇಬ್ಬರೂ ಈ ಮೊದಲೇ ಪರಿಚಿತರಾಗಿದ್ದರು. ಈ ಹಿನ್ನಲೆ ಅವರಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಇದೇ ವಿಷಯದಲ್ಲಿ ಅಸಮಧಾನದ ಹಿನ್ನಲೆ ಕೊಲೆ ನಡೆದಿದೆ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ದೊರೆಕಿದೆ.
ಸ್ಥಳಕ್ಕೆ ಆಗಮಿಸಿ ಪೊಲೀಸರು ಈಗಾಗಲೇ ಸ್ಥಳಮಹಜರು ನಡೆಸುತ್ತಿದ್ದಾರೆ. ಕೊಲೆಗೈದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.