Sunday, July 7, 2024
Homeಕ್ರೈಂMurder : ಹಣಕಾಸಿನ ವಿಷಯದಲ್ಲಿ ಕಿರಿಕ್‌ - ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆ!

Murder : ಹಣಕಾಸಿನ ವಿಷಯದಲ್ಲಿ ಕಿರಿಕ್‌ – ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆ!

ಬೆಂಗಳೂರು: ನಗರದ ಕಾಕ್ಸ್ ಟೌನ್ ಸಮೀಪ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ‌ ಘಟನೆ ನಡೆದಿದೆ.

ಅಜಿತ್ (25) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ತಡರಾತ್ರಿ ಮಾರಕಾಸ್ತ್ರದಿಂದ ಬಡಿದು ಕೊಲ್ಲಲಾಗಿದೆ. ಇಬ್ಬರೂ ಈ ಮೊದಲೇ ಪರಿಚಿತರಾಗಿದ್ದರು. ಈ ಹಿನ್ನಲೆ ಅವರಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಇದೇ ವಿಷಯದಲ್ಲಿ ಅಸಮಧಾನದ ಹಿನ್ನಲೆ‌ ಕೊಲೆ ನಡೆದಿದೆ ಎಂದು  ಪೊಲೀಸರಿಗೆ ಪ್ರಾಥಮಿಕ ಮಾಹಿತಿ ದೊರೆಕಿದೆ.

ಸ್ಥಳಕ್ಕೆ ಆಗಮಿಸಿ ಪೊಲೀಸರು ಈಗಾಗಲೇ ಸ್ಥಳ‌ಮಹಜರು ನಡೆಸುತ್ತಿದ್ದಾರೆ. ಕೊಲೆಗೈದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

ಹೆಚ್ಚಿನ ಸುದ್ದಿ