Sunday, July 7, 2024
Homeಟಾಪ್ ನ್ಯೂಸ್Zameer Ahmed : ಮುಲಾಜಿಲ್ಲದೇ ಮುಸ್ಲಿಂರ ಕೆಲಸ ಮಾಡಬೇಕು : ಸಚಿವ ಜಮೀರ್ ವಿವಾದಾತ್ಮಕ...

Zameer Ahmed : ಮುಲಾಜಿಲ್ಲದೇ ಮುಸ್ಲಿಂರ ಕೆಲಸ ಮಾಡಬೇಕು : ಸಚಿವ ಜಮೀರ್ ವಿವಾದಾತ್ಮಕ ಹೇಳಿಕೆ

ಬೀದರ್ : ಮುಸ್ಲಿಂ ಸಮುದಾಯದ ವೋಟ್​​​​ಗಳಿಂದಲೇ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಗೆದ್ದಿದ್ದು, ಹೀಗಾಗಿ ಮುಸ್ಲಿಂ ಸಮುದಾಯದವರ ಕೆಲಸವನ್ನು ಮುಲಾಜಿಲ್ಲದೇ ಮಾಡಿಕೊಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಇದೀಗ ರಾಜ್ಯದಲ್ಲಿ ಕಿಡಿ ಹೊತ್ತಿಸಿದೆ.

ಬೀದರ್ನಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಜಮೀರ್ ಅವರು ಮಾತುಗಳ ಮೂಲಕ ಬೀದರ್ ಮತದಾರರನ್ನು ಅವಮಾನಿಸಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

ಜಮೀರ್ ಅವರ ಹೇಳಿಕೆ ಬಗ್ಗೆ ಸಂಸದ ಸಾಗರ್ ಖಂಡ್ರೆ ಅವರ ತಂದೆ ಸಚಿವ ಈಶ್ವರ್ ಖಂಡ್ರೆ ಅವರೂ ಪ್ರತಿಕ್ರಿಯೆ ನೀಡಿದ್ದು, ಬೀದರ್ ಜನ ಹೇಳಿದ್ದನ್ನ ನನ್ನ ಮಗ ತಲೆಬಾಗಿ ಕೆಲಸ ಮಾಡುತ್ತಾನೆ. ಅವರು-ಇವರು ಹೇಳಿದ್ದನ್ನು ಕೇಳಿ ಮಾಡಲ್ಲ ಎಂದು ತಮ್ಮ ಪಕ್ಷದ ಸಚಿವ ವಿರುದ್ಧವೇ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

ಮಾಜಿ ಸಂಸದ ಭಗವಂತ್ ಖೂಬಾ ಅವರೂ ಜಮೀರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಜಮೀರ್ ಬೀದರ್ ಮತದಾರರನ್ನು ಅವಮಾನಿಸಿದ್ದಾರೆ ಎಂದು ಗುಡುಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕಿರಿಯ ಸಂಸದ ಸಾಗರ್ ಖಂಡ್ರೆ, ಭಗವಂತ್ ಖೂಬಾ ಅವರ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹೆಚ್ಚಿನ ಸುದ್ದಿ