Sunday, July 7, 2024
Homeಟಾಪ್ ನ್ಯೂಸ್Satish Jarakiholi : ಸ್ವಪಕ್ಷ ಶಾಸಕನ ವಿರುದ್ಧವೇ ಸಚಿವ ಸತೀಶ್ ಜಾರಕಿಹೊಳಿ ಗರಂ !

Satish Jarakiholi : ಸ್ವಪಕ್ಷ ಶಾಸಕನ ವಿರುದ್ಧವೇ ಸಚಿವ ಸತೀಶ್ ಜಾರಕಿಹೊಳಿ ಗರಂ !

ಬೆಳಗಾವಿ : ಲೋಕಸಭೆ ಚುನಾವಣೆ ವೇಳೆ ಸೋಲಿಸಲು ಎಲ್ಲಿಂದ ನಿರ್ದೇಶನ ಬಂದಿದೆ ಎಂದು ಗೊತ್ತಿತ್ತು ಎಂದು ಸ್ವಪಕ್ಷದ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧವೇ ಸಚಿವ ಸತೀಶ್ ಜಾರಕಿಹೊಳಿ ಮತ್ತೆ ಕಿಡಿಕಾರಿದರು.

ಹಾರೂಗೇರಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ಶ್ಯಾಮ್ ಘಾಟಗೆ ಅವರು ಏನು ಮಾಡಿದರು ಎಂದು ಕುಟುಕಿದ ಜಾರಕಿಹೊಳಿ, ಘಾಟಗೆ ಅವರು ಕುಸ್ತಿ ಆಡಿ ನಮ್ಮ ಚುನಾವಣೆಗೆ ಯಾಕೆ ತೊಂದರೆ ಮಾಡಿದ್ದೀರಿ? ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ವಿ, ನೀವು ಯಾಕೆ ಹೀಗೆ ಮಾಡಿದ್ರಿ ಎಂದು ಸತೀಶ್ ಅವರು ವಾಗ್ದಾಳಿ ನಡೆಸಿದರು.

22 ಸಾವಿರ ಲೀಡ್ ಕೊಟ್ಟಿದ್ದೇನೆ ಎಂದಿದ್ದ ಮಹೇಂದ್ರ ತಮ್ಮಣ್ಣವರಿಗೆ ಕುಡಚಿ ಒಂದೇ ಊರಲ್ಲಿ 18 ಸಾವಿರ ಮತಗಳು ಬಂದಿವೆ. ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದಿದ್ದವು. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ ಎಂದು ವ್ಯಂಗ್ಯವಾಡಿದರು.

ಹೆಚ್ಚಿನ ಸುದ್ದಿ