ಬೆಂಗಳೂರು : ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾಗಿರುವ ದರ್ಶನ್ ನನ್ನು ನೋಡಿ ತಾಯಿ ಮೀನಾ ಅವರು ಕಣ್ಣೀರು ಹಾಕಿದ್ದಾರೆ.
ಕಳೆದ ಹತ್ತು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ತಾಯಿಯನ್ನು ನೋಡಬೇಕು ಎಂದು ಚಡಪಡಿಸುತ್ತಿದ್ದರು, ಅಂತೆಯೇ ಇಂದು ದರ್ಶನ್ ನೋಡಲು ಅವರ ಕುಟುಂಬಸ್ಥರು ಆಗಮಿಸಿದ್ದರು.
ದರ್ಶನ್ ತಾಯಿ ಮೀನಾ, ಸಹೋದರ ದಿನಕರ್, ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಕುಟುಂಬ ಸಮೇತರಾಗಿ ಇಂದು ದರ್ಶನ್ ರನ್ನು ನೋಡಲು ಬಂದಿದ್ದರು.
ಈ ವೇಳೆ ಮಗನ ಪರಿಸ್ಥಿತಿ ನೋಡಿ ತಾಯಿ ಕಣ್ಣೀರು ಹಾಕಿ ದರ್ಶನ್ ರನ್ನು ಬಿಗಿದಪ್ಪಿಕೊಂಡಿದ್ದಾರೆ. ನಂತರ ಮಗ ವಿನೀಶ್ ನನ್ನು ತಬ್ಬಿಕೊಂಡು ದರ್ಶನ್ ಜೋರಾಗಿ ಅತ್ತಿದ್ದಾರೆ.
ಇನ್ನು ಇದೇ ವೇಳೆ ತಮ್ಮ ಕಾನೂನು ಹೋರಾಟದ ಕುರಿತಾಗಿಯೂ ಕುಟುಂಬಸ್ಥರ ಜೊತೆ ದರ್ಶನ್ ಚರ್ಚಿಸಿದ್ದಾರೆ ಎನ್ನಲಾಗಿದೆ