ಕೊಪ್ಪಳ : ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿ ಹೋಗಿ ಬಯೋಡೇಟಾ ಕೊಟ್ಟು ಹುಡುಕಿ ಕೊಡುವಂತೆ ಹೇಳುತ್ತಾರೆ, ಇನ್ನು ಕೆಲವರು ಜಾಹೀರಾತು ಕೊಡಬಹುದು ಆದರೆ ಇಲ್ಲೊಬ್ಬ ಭೂಪ ಹುಡುಗಿ ಹುಡುಕಿ ಕೊಡಿ ಎಂದು ಡಿಸಿಗೆ ಅರ್ಜಿ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಳೀನ್ ಅತುಲ್ ಅವರಿಗೆ ಮನವಿ ಮಾಡಿದ್ದು, ಅದೇ ತಾಲೂಕಿನ ಸಂಗಪ್ಪ ಎಂಬಾತ ಡಿಸಿಗೆ ಪತ್ರ ಬರೆದಿದ್ದು, ನಮ್ಮದೇ ಜಾತಿಯ ಹೆಣ್ಮಗಳೇ ಬೇಕೆಂದು ಕೂಡ ಕಂಡೀಷನ್ ಹಾಕಿದ್ದಾರೆ.
ಕಳೆದ ಹತ್ತು ವರ್ಷದಿಂದ ಹುಡುಗಿಯನ್ನು ಹುಡುಕುತ್ತಿದ್ದೇನೆ. ಆದರೆ ಒಂದು ಹುಡುಗಿ ಕೂಡ ಸಿಗಲಿಲ್ಲ. ನನ್ನಂತೆ ಕನಕಗಿರಿಯಲ್ಲಿ ನೂರಾರು ಯುವಕರು ಇದ್ದಾರೆ. ದಯವಿಟ್ಟು ಕನ್ಯೆ ಕೊಡ್ಸಿ ನಮ್ಮ ಬಾಳು ಬೆಳಗಿ ಎಂದು ಸಂಗಪ್ಪ ಮನವಿ ಮಾಡಿಕೊಂಡಿದ್ದಾರೆ
ಸಂಗಪ್ಪನಿಂದ ಮನವಿ ಸ್ವೀಕರಿಸಿದ ಡಿಸಿ ನಳೀನ್ ಅತುಲ್ ಅಲ್ಲೇ ಪಕ್ಕದಲ್ಲಿದ್ದ ಅಧಿಕಾರಿಯ ಬಳಿ ಇದು ಯಾವ ಇಲಾಖೆಗೆ ಬರುತ್ತೆ ಎಂದು ಕೇಳಿದ್ದಾರೆ. ನಂತರ ತುಂಬಿದ ಸಭೆಯಲ್ಲಿ ಯಾರಿಗಾದ್ರೂ ಈ ಬಗ್ಗೆ ಏನಾದ್ರೂ ಪರಿಹಾರ ಗೊತ್ತಿದ್ರೆ ಸೂಚಿಸಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ