Sunday, July 7, 2024
Homeಟಾಪ್ ನ್ಯೂಸ್VIRAL NEWS : ಅಲೆಲೆಲೆ...! ಇವನನ್ನೇ ಸಿಎಂ ಮಾಡಬೇಕಂತೆ! : ಯುವಕನ ವಿಡಿಯೋ ನೋಡಿ

VIRAL NEWS : ಅಲೆಲೆಲೆ…! ಇವನನ್ನೇ ಸಿಎಂ ಮಾಡಬೇಕಂತೆ! : ಯುವಕನ ವಿಡಿಯೋ ನೋಡಿ

ವಿಜಯಪುರ: ರಾಜ್ಯದಲ್ಲಿ  ಸಿಎಂ ಬದಲಾವಣೆಯ ಕುರಿತು ಪರ ವಿರೋಧ ಚರ್ಚೆಯ ಬೆನ್ನಲ್ಲೇ ಬಸವನಾಡಿನ ಯುವಕನೊಬ್ಬ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾನೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸತೀಶ ಲಮಾಣಿ ಎಂಬಾತ ತನ್ನನ್ನು ಹೊಸ ಮುಖ್ಯಮಂತ್ರಿ ಮಾಡಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.  

ಸತೀಶ್ ಎಂಬಾತ ಬಸವನಬಾಗೇವಾಡಿ ಪಟ್ಟಣದಲ್ಲಿನ ಮೂಲನಂದೀಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ಶಿವಲಿಂಗದ ಎದುರು ನಿಂತು ನನ್ನನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲವಾದಲ್ಲಿ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದ್ದಾನೆ. 

ಶಿವಲಿಂಗದ ಆಣೆಗೂ ನಾನು ಹೇಳುವುದು ಸತ್ಯ, ನನ್ನನ್ನು ಮುಖ್ಯಮಂತ್ರಿ ಮಾಡದಿದ್ದರೆ ಕಷ್ಟ ಎಂದು ಹೇಳಿದ್ದು,  ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಸಂದರ್ಭದಲ್ಲೂ ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೇಳಿದ್ದೆ..  

ಆದರೆ ನಿರ್ಲಕ್ಷ್ಯ ಮಾಡಿದ್ದರಿಂದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿ, ನನ್ನ ಮಾತು ಸತ್ಯವಾಗಿದೆ ಎಂದಿದ್ದಾನೆ.

ರಾಜ್ಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಇಳಿಯಬೇಕಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದಾನೆ.

ಒಂದು ವೇಳೆ ನನ್ನನ್ನು ಮುಖ್ಯಮಂತ್ರಿ ಮಾಡದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ. ಇದು ಶಿವಲಿಂಗದ ಮೇಲಾಣೆ, ಜೈ ಸೇವಾಲಾಲ್ ಎಂದು ಕೊನೆಯಲ್ಲಿ ಘೋಷಣೆ ಕೂಗಿದ್ದಾನೆ

ಹೆಚ್ಚಿನ ಸುದ್ದಿ