Sunday, July 7, 2024
Homeಕ್ರೈಂMurder case : ಏಳು ವರ್ಷದ ಬಾಲಕಿಯನ್ನು ಕೊಂದು ಬಾವಿಗೆಸೆದ ಪಾತಕಿ - ಕಾರಣ...

Murder case : ಏಳು ವರ್ಷದ ಬಾಲಕಿಯನ್ನು ಕೊಂದು ಬಾವಿಗೆಸೆದ ಪಾತಕಿ – ಕಾರಣ ಕೇಳಿದ ಪೊಲೀಸರೇ ಶಾಕ್‌!

ಕೊಪ್ಪಳ : ಎರಡು ತಿಂಗಳ ಹಿಂದೆ ನಡೆದಿದ್ದ ಏಳು ವರ್ಷದ ಬಾಲಕಿ ಅನುಶ್ರೀ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಾಲಕಿಯನ್ನು ಹತ್ಯೆಗೈದಿದ್ದ ಸಿದ್ದಲಿಂಗಯ್ಯ (51) ಎಂಬಾತ ಬಾಲಕಿಯನ್ನು ಕೊಲೆ ಮಾಡಿದ್ದು, ಕಾರಣ ಕೇಳಿದ ಪೊಲೀಸರೇ ಶಾಕ್‌ ಆಗಿದ್ದಾರೆ.

ಅಂಗಡಿಯಿಂದ ತನಗೆ ಗುಟ್ಕಾ ತಂದು ಕೊಡಲು ನಿರಾಕರಿಸಿದಳೆಂಬ ಕಾರಣಕ್ಕೆ ಬಾಲಕಿಯನ್ನು ಹತ್ಯೆಗೈದಿರುವುದಾಗಿ ಸಿದ್ದಲಿಂಗಯ್ಯ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಏ. 18 ರಂದು ಈ ಹತ್ಯೆ ಬೆಳಕಿಗೆ ಬಂದಿತ್ತು. ಕೊಪ್ಪಳದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಮರುದಿನವೇ ಮನೆಯ ಸಮೀಪದ ಪಾಳುಬಾವಿಯಲ್ಲಿ ಅನುಶ್ರೀ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಹೆಚ್ಚಿನ ಸುದ್ದಿ